"ಈ ಗುಲಾಬಿಯು ನಿನಗಾಗಿ ಇದು ಸೂಸುವ ಪರಿಮಳ ನಿನಗಾಗಿ..." ಪುರಂದರ ದಾಸರ ೩೩೫ನೇ ಮೇಳಕರ್ತಾ ರಾಗದಲ್ಲಿ ಹಾಡಲು ಶುರು ಮಾಡಿದ ಪ್ರವಾದಿಯ ಬಾಯಿ ಮುಚ್ಚಿಸಬೇಕೋ ಅಥವಾ ಈಗ ಗುಲಾಬಿ ಮೇಡಮ್ English class ಎಂದು ನೆನಪಿಸಿದ್ದಕ್ಕೆ thanks ಹೇಳಬೇಕೋ ಎಂದು ಯೋಚಿಸುತ್ತಿರುವಷ್ಟರಲ್ಲಿ ಮೇಡಂ classಗೆ entry ಕೊಟ್ಟಾಗಿತ್ತು. ನಗುವನ್ನು ಮರೆಮಾಚಿ ಎದ್ದುನಿಂತು "ನಗುವಾ .... " ಎಂದು ಹಾಡಿ(ಸ್ವಗತ) ಕುಳಿತೆವು. ನಿಮ್ಮ ತಲೇಲಿ ಪುರಂದರ ದಾಸರ ಮೇಳಕರ್ತಾ ರಾಗ, ಅದೂ ೩೩೫ನೇದು ಯಾವುದು? ಅಂತ ಕೊರಿತಿದೆ ಅನ್ಸುತ್ತೆ. ಅದಕ್ಕೋಸ್ಕರ ನೀವು Google ಗೆ ಹೋಗಿ ಹುಡುಕೋದು? ಅದು ಸಿಗದೆ ತಲೆ, ಮೈ ಪರಚಿಕೊಳ್ಳೋದು ಎಲ್ಲ ಬೇಡ. So ಮೊದ್ಲೇ ಹೇಳಿ ಬಿಡ್ತೀನಿ. ಈ ತಿರುಕರ ಬಿಕ್ಷೆ ಬೇಡೋ ರೀತಿ ನಿಮಗೆಲ್ಲಾ ಗೊತ್ತಿದೆ ತಾನೆ? ಅವರು ಕೂಗ್ತಾರಲ್ವ ಅದನ್ನ ನಾವು ಸ್ವಲ್ಪ ಸ್ಟೈಲಾಗಿ ಹೀಗೆ ಕರೀತಿವಿ. ಬೇಜಾರಿಲ್ಲ ತಾನೆ?
ನಾನು ಹೇಳೋಕೆ ಹೊರಟಿರೋದು ನನ್ನ PU college ದಿನಗಳ ಬಗ್ಗೆ. ಮೊದಲನೇ ಬಾರಿ Pant ಹಾಕ್ಕೊಂಡು (ಅಲ್ಲಿ ತನಕ ಏನು ಹಕ್ತಿರ್ಲಿಲ್ಲ ಅಂತಲ್ಲಾ ಸ್ವಾಮಿ ಮೊದಲು ಚಡ್ಡಿ ಹಾಕ್ತಿದ್ದೆ ಅಂತ ಅದರರ್ಥ. ಜನ ಬುದ್ದಿವಂತರಾಗೋಕ್ ಹೋಗಿ ಅಪಾರ ಅರ್ಥ ಮಾಡ್ಕೊಳೋರ್ ಸಂಖ್ಯೆ ಜಾಸ್ತಿ ಆಗಿದೆ. ಕಲಿಯುಗ!!!???) college ಮೆಟ್ಟಿಲು ಹತ್ತಿ classಗೆ entry ಕೊಟ್ರೆ ಎಲ್ಲ ಹೊಸ ಮುಖಗಳೇ ಕಾಣಿಸಿದ್ವು. ಅದೇ ಸಮಯಕ್ಕೆ ನನ್ನ ಹೆಸರು ಹಿಡಿದು ಯಾರೋ ಕೂಗಿದ ಹಾಗಾಯ್ತು. ಹುಡುಗರ ಸಾಲಿನಲ್ಲಿ ಹುಡುಕ ತೊಡಗಿದೆ. ಮತ್ತೊಮ್ಮೆ ಕರೆದರು. ಆದರೆ ದ್ವನಿ ಬರ್ತಿರೋದು ಹುಡುಗಿಯರ ಸಾಲಿನಿಂದ. ನಂಗೆ ಯಾವ ಹುಡುಗಿಯರು ಪರಿಚಯ ಇಲ್ವಲಾ? ಹುಡುಗಿಯರೇ ragging ಮಾಡೋಕ್ ಕರೀತಿದಾರಾ? ಆ ಕಡೆ ತಿರ್ಗೋದೋ ಬೇಡ್ವೋ? ಅಂತ ಮನದಲ್ಲೇ ಯೋಚಿಸಿ " ಕತ್ತಿ ಹೆಗಲಲ್ಲಿಟ್ಟು ತಾನೆಯು! ಮತ್ತೆ ಬರುವಳು ಹಿಂದೆ ಮುಂದೆಯು! ..... ಮತ್ತೆ ಚಿಂತೆತ್ತಣದು ಭಯ ದೇವಿ ಕಾದಿರೆ! ಸತ್ಯ ನುಡಿಯಿದು ಭಯವದಿಲ್ಬ್ರಹ್ಮಾದಿಗಳದೆಂದ!" (ಜಗನ್ಮಾತೆಯ ನೆನೆವವರಿಗೆ ಯಾರಿಂದಲೂ ಭಯವಿಲ್ಲ) ದೇವೀಮಹಾತ್ಮೆಯ ಒಂದು ಷಟ್ಪದಿಯ ಮೂಲಖ ತಾಯಿಯನ್ನು ಈ ಭೂಲೋಕದ ನಾ(ಮಾ)ರಿಯರಿಂದ ರಕ್ಷಿಸೆಂದು ಬೇಡತೊಡಗಿದೆ. ಅಷ್ಟರಲ್ಲಿ ಆಚಾರಿ ಅದೆಲ್ಲಿಂದನೋ ಬಂದು ತನ್ನ ಸ್ಥಳಕ್ಕೆ ಕರೆದುಕೊಂಡು ಹೋದ.
ನಮ್ಮ ಬೆಂಚ್ ನಲ್ಲಿ govt ಹೈಸ್ಕೂಲ್ ಸಹಪಾಠಿಗಳೇ ಇದ್ರು ಪ್ರವಾದಿ, ಆಚಾರಿ, ಮಾರೀಚ, ಇನ್ನೊಬ್ಬ ಪ್ರವಾದಿಯ ಸಂಬಧಿಕ. ಅವನ ಪರಿಚಯನು ಆಯಿತು. ಅಷ್ಟರಲ್ಲೆ lecturer ಬಂದ್ರು. ಪಾಠ ಮಾಡೋದು ಬಿಟ್ಟು ಎಲ್ಲರ ಹೆಸರು ಕೇಳೋಕ್ ಶುರು ಮಾಡಿದ್ರು. ನಮ್ಮ ಮುಂದಿನ ಬೆಂಚ್ ತನಕನೂ ಬಂದಾಯ್ತು. ಈಗ ಮೈಯೆಲ್ಲ ಕಿವಿಯಾಗಿಸಿ ಕೇಳೋಕ್ ಶುರುಮಾಡಿದ್ವಿ.
ಶ್ರುತಿ G M . SJ………….S Sringeri. ಎಲ್ಲರು ಒಬ್ರಿಗೊಬ್ರು ಮುಖ ನೋಡ್ಕೊಂಡ್ವಿ.
ಮತ್ತೆ ಶ್ರುತಿ H L SJ A………….S Sringeri. ಎರಡನೇದು.
ನಾನು ಸುಮ್ನಿರಲಾರ್ದೆ ಕೇಳೇಬಿಟ್ಟೆ.ಲೇ ಪ್ರವಾದಿ Sringeri ಜೊತೆ ABCD, ಅದೂ ಉಲ್ಟಾ ಪಲ್ಟಾ ಯಾಕೋ ಹೇಳ್ತಿದಾರೆ? ಮುಂದಿನ ಬೆಂಚ್ ನ ಅಷ್ಟೂ ಜನ ತಿರುಗಿ ದರ್ಶನ ಕೊಟ್ರು. ಹೀಗೆ ಒಟ್ಟಿಗೆ ನೋಡಿದ್ರೆ ಯಾರನ್ನ ನೋಡೋದು ಯಾರನ್ನ ಬಿಡೋದು ಅನೋದೇ ಅರ್ಥ ಆಗ್ಲಿಲ್ಲ. ಸುಮ್ನೆ ಹೇಳಿದೆ, Actually ಎಲ್ಲರು ಗುರಾಯಿಸಿದ್ರು. ನನ್ನ ಉಸಿರು ಕೂಡ ಬಂದ್ ಆಯಿತು.
ಮತ್ತೆ ಇಬ್ರು ಅದನ್ನೇ repeat ಮಾಡಿ ಕೂತ್ರು. ಈಗ ಸ್ವಲ್ಪ ನಿಧಾನಕ್ಕೆ ವಿಪ್ರನಿಗೆ ಹೇಳಿದೆ. ಯಾವುದೋ ಒಂದು alphabet ಮಿಸ್ ಆಗ್ತಿದೆ ಅಲ್ವಾ ಅಂತ. ನನ್ನ ಕರ್ಮ ಅದೂ ಕೇಳಿಸ್ ಬೇಕೇ? ಈ ಬಾರಿ ನಾನು ಅವರ ಕರುಳೊಳಗೇ ಹೋದ್ನೇನೋ ಅನ್ನಿಸಿಬಿಡ್ತು. ತಿನ್ನೋ ಹಾಗೆ ನೋಡಿದ್ರು. ( ರೌದ್ರಂ ರೌದ್ರಾಂತಕಂ ಘೋರಂ) ಆಮೇಲೆ ಅವತ್ತಿಡಿ ಮಾತೇ ಹೊರಡ್ಲಿಲ್ಲ.
ಇಷ್ಟರಲ್ಲಾಗಲೇ ನಿಮಗೆ ನಾನು ಮೊದಲು ಹೇಳಿದ ಘಟನೆ(ಹುಡುಗಿಯರ ಸಾಲಿನಿಂದ ಬಂದ ದ್ವನಿ) ನಡೆದಿರಬಹುದಾದ ರೀತಿ ಅರ್ಥ ಆಗಿರಬಹುದು. ಹ್ನೂಂ ನಾನು ಹೋಗಿ ಕೂತಿದ್ದು ಲಲನಾಮಣಿಯರ ಹಿಂದೆ. ಅವರೆಲ್ಲಾ ನಮ್ಮ ಊರಿನ ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಬಾಲಿಕಾ ಪ್ರೌಡಶಾಲೆಯಿಂದ ಬದವರು. ಆ ಶಾಲೆಯ ಹೆಸರಿನ shortform
ಉಂಟಲ್ವಾ ಅದನ್ನೇನಾದ್ರು ನೀವು ಒಂದೇ ಸರಿ ಕೇಳಿ ನೆನಪಿಟ್ಟುಕೊಂಡ್ರೆ ನಿಮಗೆ ನೊಬೆಲ್ guarantee.
ನಿಮಗೆ ಗೊತ್ತೇ ಇದೆ ಹುಡುಗಿಯರು ಹತ್ರ ಇದ್ರೆ ಹುಡುಗ್ರ ಕತೆ ಮಂಗಕ್ಕೆ ಹೆಂಡ ಕುಡಿಸಿ ಬಿಟ್ಟ ಹಾಗೆ ಅಂತ. ಅದು ನಮಗೂ ಆಗಿತ್ತು. ಎಲ್ಲಾ period ನಲ್ಲೂ ಏನಾದ್ರು ಒಂದು ತಮಾಶೆ ಮಾಡ್ತಾ ಅದ್ರಲ್ಲೂ temporary lecturers (ಗುಲಾಬಿ ಮೇಡಂತರದವ್ರನ್ನ)ನ ಗೋಳು ಹೊಯ್ಕೊಳ್ತಿದ್ವಿ. ಹೀಗೇ ಒಂದ್ಸಲ ಪ್ರವಾದಿ ಏನೋ ತಮಾಶೆ ಮಾಡೋಕ್ ಹೋಗಿ ಹುಡುಗಿಯರು ಗಟ್ಟಿಯಾಗಿ ನಗಾಡಿ ಸಿಕ್ಕಿಬಿದ್ದು ಎಲ್ಲ ಆಗಿತ್ತು.
ಅವರೆಲ್ಲಾ ಆಮೇಲೆ ಒಳ್ಳೆ friends ಕೂಡ ಆದ್ರು. ನಮ್ಮಹತ್ರ doubts ಕೂಡ ಕೇಳ್ತಾ ಇದ್ರು. ಒಂದೂವರೆ ವರ್ಷ ತುಂಬಾನೇ ಎಂಜಾಯ್ ಮಾಡಿದ್ವಿ. ಇನ್ನೂ ತುಂಬಾ ವಿಷಯಗಳಿದಾವೆ ಇದರ ಬಗ್ಗೆ, ಅದನ್ನೆಲ್ಲಾ ಬರೀತಾ ಹೋದರೆ ರಾಮಾಯಣ, ಮಹಾಭಾರತ ಅಧ್ಯಾಯಗಳ ಸಂಖ್ಯೆಯನ್ನೂ ಮೀರಿಸಬಹುದು. ಅದನ್ನೆಲ್ಲಾ ಇನ್ನೊಮ್ಮೆ ಯಾವಾಗ್ಲಾದ್ರು ಹೇಳ್ತೀನಿ.
"ಸ್ನೇಹ ಅತಿ ಮಧುರ.. ಸ್ನೇಹ ಅದು ಅಮರ" ಏನಂತೀರಿ?
ಬುಧವಾರ, ಆಗಸ್ಟ್ 25, 2010
ಶುಕ್ರವಾರ, ಆಗಸ್ಟ್ 13, 2010
ಮುಸ್ಸಂಜೆ ಮಾತು
"ಯಾವ ಕಡೆಗೋ"
ಅಪ್ಪನ ದನಿ ಸಂಜೆ ಆಗುತ್ತಿದ್ದ ಹಾಗೆ ಅಂಗಿ ಹಾಕ್ಕೊಂಡು ಹೊರಟ ನನ್ನ ಕಿವಿ ತಾಕಿತು.
"ಮೇಲೆ" ಎಂದು ಉತ್ತರಿಸಿ ಚಪ್ಪಲಿ ಏರಿಸಿ ಹೊರಟೆ. ಮೇಲೆ ಅಂದ್ರೆ ಮೇಲಕ್ಕಲ್ಲ ಸ್ವಾಮಿ ನಮ್ಮ ಮನೆ, ಮಲೆನಾಡಿನ ಒಂದು ಸಣ್ಣ ಹಳ್ಳಿ. ಹಳ್ಳಿ ಅಂದ್ರು ತಪ್ಪಾಗುತ್ತೆ. ದಟ್ಟಡವಿಯ ನಡುವೆ ಕಟ್ಟಿರುವ ಪುಟ್ಟ ಒಂಟಿ ಮನೆ. ಪೇಟೆಗೆ ಹೋಗೋ ಟಾರ್ ರೋಡ್ ಗಿಂತ ಸ್ವಲ್ಪ ಕೆಳಗೆ ಇದೆ. ಹಾಗಾಗಿ ಈ ಪದ ಬಳಕೆಗೆ ಬಂದಿದೆ ಅಷ್ಟೆ.
ಇದು ಪ್ರತಿ ದಿನದ ಹಾಡು. ಸೂರ್ಯ ಮುಳುಗೋ ಸಮಯ ಹೆಚ್ಚು ಕಮ್ಮಿ ಆದ್ರೂ ಆಗ್ಬಹುದು, ಆದರೆ ನಾನು ಸಂಜೆ ಮನೆ ಬಿಡೊ ಸಮಯ ಹೆಚ್ಚು ಕಮ್ಮಿ ಆಗ್ತಿರ್ಲಿಲ್ಲ. ಹಾಗೇ ಅಪ್ಪಂಗೂ ಇದು ಅಭ್ಯಾಸ ಆಗಿಹೋಗಿತ್ತು. ಮಗ ದಾರಿ ತಪ್ಪಿದ್ದು ಅವರಿಗೂ ಗೊತ್ತಿತ್ತು ಅಂತೀರಾ? ಹ್ನೂಂ ಅದು ಸರೀನೇ...
ಬೇಸಿಗೆಯಲ್ಲಿ ಹಗಲೆಲ್ಲ ಕೆಲಸಗಾರರ ಬೆವರನ್ನೇ ಇಳಿಸಿದ್ರೂ ರಕ್ತವನ್ನೇ ಹೀರಿದಂತೆ ಕಾಣುವ ಮರೆಯಾಗಲು ಹೊರಟ ಸೂರ್ಯ, ಜೀರುಂಡೆಗಳ ಕೂಗಾಟವನ್ನೇ ಮೀರಿಸ ಹೊರಟ, ಧೋ ಎಂದು ಸುರಿಯುತ್ತಿರುವ ಮಲೆನಾಡಿನ ಮಳೆಗಾಲದ ಮಳೆ, ಚಂದ್ರ ಬರುವನೆಂಬ ಹೆದರಿಕೆಗೋ ಎಂಬಂತೆ ಕಾನನದ ಮಧ್ಯೆ ಮರೆಯಾಗಲು ಹೊರಟ ನವಿಲುಗಳು, ಇವೆಲ್ಲದರ ಸೌಂದರ್ಯವನ್ನು ಸವಿಯುತ್ತ ನನ್ನ ಸಂಜೆಯ ಪಯಣ.
ಸ್ನೇಹಿತನ ಮನೆಗೆ ಕೇವಲ ಹತ್ತು ನಿಮಿಷಗಳ ದಾರಿ. ಆದರೆ ಈ ಸಂಜೆಯ ಸೊಬಗು ಯಾವತ್ತೂ ನನ್ನನ್ನು ಹತ್ತು ನಿಮಿಷದಲ್ಲಿ ಕ್ರಮಿಸಲು ಬಿಟ್ಟಿಲ್ಲ. ನಾವಡ,ಧಾರೇಶ್ವರರ ಧಾಟಿಯಲ್ಲಿ ಭಾಗವತಿಗೆ, ಭಾವಗೀತೆಗಳು, ಹಿಂದಿ ಸಿನಿಮಾ ಹಾಡುಗಳು ಬಾಯಿಗೆ ಬಂದ ಹಾಗೆ ಒಂದರ ಮೇಲೊಂದರಂತೆ ಹಾಡುತ್ತಾ ಅಲ್ಲ ಕಿರುಚುತ್ತಾ ನಡೆಯೋದು ನನ್ನ ಅಭ್ಯಾಸ. ಈಗಲೂ ನಾನು ಮನೆಗೆ ಹೋದ್ರೆ ಊರವ್ರಿಗೆಲ್ಲ ಗೊತಾಗೋದು ಈ ಕಿರುಚಾಟದಿಂದಾನೇ. ಮನೆ ತಲುಪಿದ ಅರ್ಧಘಂಟೆಯೊಳಗೆ ಎಲ್ಲ ಬಂದು "ನಮ್ಮ ಊರಿಗೆ ಯಾರೇ ಬಂದ್ರು ನಮಗೆ ಗೊತಾಗುತ್ತೆ. ನೀನು ಕದ್ದು ಕೂತ್ರೆ ಗೊತಾಗೋಲ್ಲ ನಮಗೆ ಅಂದ್ಕೊಂಡಿದಿಯಾ? ಹೊರಗೆ ಬಾರಾ?" ಅಂತ ಒಬ್ರು ಕರದ್ರೆ ಇನ್ನೊಬ್ರು "ಯಾಕಾ ಬಂದೀ, ಅಲ್ಲಿಂದ ಬೆರೆಸಿದ್ರೇನೋ " ಅಂತಾನೋ ಇಲ್ಲಾ "ದುಡುದ್ ತಿನ್ನ್ರೋ ಅಂತಂದ್ರೆ ಈ ಹುಡುಗ್ರು ಮೂರು ಮೂರು ದಿನಕ್ಕೆ ಓಡಿ ಬರ್ತಾವಪ್ಪಾ" ಅಂತ ಹೇಳೋಕ್ ಶುರು ಮಾಡ್ತಾರೆ. ನಾನು ಉತ್ತರ ಹೇಳೋಕೆ ಮುಂಚೇನೆ ಅಪ್ಪ ಅವ್ರಿಗೆಲ್ಲ ಅವರ ಮಾತಿನ ಧಾಟಿಯಲ್ಲೇ ಉತ್ತರ ಕೊಟ್ಟು ಸುಮ್ನಾಗಿಸ್ತಾರೆ. ನನ್ನ ಕೈಲಿ ಆಗದ ಮಾತು ಬಿಡಿ....
ನನ್ನ ಬಾಲ್ಯದ ದಿನಚರಿಗೆ ಮತ್ತೆ ವಾಪಾಸಾಗ್ತೀನಿ. ದಿನಾ ಅವನ ಮನೆಗೆ ಹೋಗೋದೂ, ಒಂದು ಕಾಫೀ ಜೊತೆಗೆ ಏನಾದ್ರು ತಿನ್ನೋಕೆ. ಅಲ್ಲಿಂದ "ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ" ಅಂತ ಹಾಡುತ್ತಾ ವೈಕುಂಠಪುರದ ಕಡೆಗೆ ಒಂದು ಸಣ್ಣ ವಾಕಿಂಗ್. ಅಲ್ಲಿಂದ ಮತ್ತೆ ನಮ್ಮ ಮನೆಯ ದಟ್ಟಡವಿಯ ಹಾದಿಗೆ ವಾಪಾಸಾಗಿ ನಮ್ಮ ಕಟ್ಟೆ ಪುರಾಣ ಶುರು ಮಾಡ್ತಿದ್ವಿ. ವೇದ, ಉಪನಿಷತ್ ಗಳಿಂದ ಹಿಡಿದು ಪೇಟೆಯ ಪಡ್ಡೆ ಹುಡುಗರ ದುರ್ಗುಣಗಳು ಎಲ್ಲ ನಮ್ಮ ಚರ್ಚೆಯಲ್ಲಿ ಬರ್ತಿದ್ವು. ಕೆಲವೊಮ್ಮೆ ರಾತ್ರಿ ಹನ್ನೊಂದು ಘಂಟೆ ಆದ್ರು ನಮ್ಮ ಮಾತು ಮುಗೀತಿರ್ಲಿಲ್ಲ. ಮನೆಗೆ ಹೊರಡುವಾಗ ಇಬ್ರು ಹೇಳ್ಕೊಳೋದಿತ್ತು. "ಏನು ಮಾತಾಡಿದ್ವೋ ಇಷ್ಟೊತ್ತು " ಅಂತ, ಆದ್ರೆ ಇಬ್ರಿಗು ನೆನಪಿರ್ತಿರ್ಲಿಲ್ಲ.
ಈಗ ಇದು ಬರಿ ನೆನಪು ಮಾತ್ರ. ತಿಂಗಳಲ್ಲಿ ಒಮ್ಮೆ ಮಾತಾಡೋದು ಕಷ್ಟ. . ಜೀವನದ ನದಿಯಲ್ಲಿ ಇಬ್ರು ಕೊಚ್ಚಿ ಹೋಗಿಬಿಟ್ಟಿದಿವಿ. ಪ್ರವಾಹ ನಮ್ಮನ್ನ ಮನೆಯಿಂದ ಬಹುದೂರ ಎಳೆತಂದಿದೆ. ಇದು ಹೊಟ್ಟೆಪಾಡಲ್ಲ ಸ್ವಾಮಿ, ದುರಾಸೆ. ಒಂದಂತು ತಪ್ಪು ಮಾಡಿ ಕಳಕೊಂಡ್ವಿ ಆದ್ರೆ ಈ ಸ್ನೇಹವಾದರೂ ಕೊನೆತನಕ ಉಳಿಯಲಿ ಅನ್ನೋ ಆಸೆ.
ಅಪ್ಪನ ದನಿ ಸಂಜೆ ಆಗುತ್ತಿದ್ದ ಹಾಗೆ ಅಂಗಿ ಹಾಕ್ಕೊಂಡು ಹೊರಟ ನನ್ನ ಕಿವಿ ತಾಕಿತು.
"ಮೇಲೆ" ಎಂದು ಉತ್ತರಿಸಿ ಚಪ್ಪಲಿ ಏರಿಸಿ ಹೊರಟೆ. ಮೇಲೆ ಅಂದ್ರೆ ಮೇಲಕ್ಕಲ್ಲ ಸ್ವಾಮಿ ನಮ್ಮ ಮನೆ, ಮಲೆನಾಡಿನ ಒಂದು ಸಣ್ಣ ಹಳ್ಳಿ. ಹಳ್ಳಿ ಅಂದ್ರು ತಪ್ಪಾಗುತ್ತೆ. ದಟ್ಟಡವಿಯ ನಡುವೆ ಕಟ್ಟಿರುವ ಪುಟ್ಟ ಒಂಟಿ ಮನೆ. ಪೇಟೆಗೆ ಹೋಗೋ ಟಾರ್ ರೋಡ್ ಗಿಂತ ಸ್ವಲ್ಪ ಕೆಳಗೆ ಇದೆ. ಹಾಗಾಗಿ ಈ ಪದ ಬಳಕೆಗೆ ಬಂದಿದೆ ಅಷ್ಟೆ.
ಇದು ಪ್ರತಿ ದಿನದ ಹಾಡು. ಸೂರ್ಯ ಮುಳುಗೋ ಸಮಯ ಹೆಚ್ಚು ಕಮ್ಮಿ ಆದ್ರೂ ಆಗ್ಬಹುದು, ಆದರೆ ನಾನು ಸಂಜೆ ಮನೆ ಬಿಡೊ ಸಮಯ ಹೆಚ್ಚು ಕಮ್ಮಿ ಆಗ್ತಿರ್ಲಿಲ್ಲ. ಹಾಗೇ ಅಪ್ಪಂಗೂ ಇದು ಅಭ್ಯಾಸ ಆಗಿಹೋಗಿತ್ತು. ಮಗ ದಾರಿ ತಪ್ಪಿದ್ದು ಅವರಿಗೂ ಗೊತ್ತಿತ್ತು ಅಂತೀರಾ? ಹ್ನೂಂ ಅದು ಸರೀನೇ...
ಬೇಸಿಗೆಯಲ್ಲಿ ಹಗಲೆಲ್ಲ ಕೆಲಸಗಾರರ ಬೆವರನ್ನೇ ಇಳಿಸಿದ್ರೂ ರಕ್ತವನ್ನೇ ಹೀರಿದಂತೆ ಕಾಣುವ ಮರೆಯಾಗಲು ಹೊರಟ ಸೂರ್ಯ, ಜೀರುಂಡೆಗಳ ಕೂಗಾಟವನ್ನೇ ಮೀರಿಸ ಹೊರಟ, ಧೋ ಎಂದು ಸುರಿಯುತ್ತಿರುವ ಮಲೆನಾಡಿನ ಮಳೆಗಾಲದ ಮಳೆ, ಚಂದ್ರ ಬರುವನೆಂಬ ಹೆದರಿಕೆಗೋ ಎಂಬಂತೆ ಕಾನನದ ಮಧ್ಯೆ ಮರೆಯಾಗಲು ಹೊರಟ ನವಿಲುಗಳು, ಇವೆಲ್ಲದರ ಸೌಂದರ್ಯವನ್ನು ಸವಿಯುತ್ತ ನನ್ನ ಸಂಜೆಯ ಪಯಣ.
ಸ್ನೇಹಿತನ ಮನೆಗೆ ಕೇವಲ ಹತ್ತು ನಿಮಿಷಗಳ ದಾರಿ. ಆದರೆ ಈ ಸಂಜೆಯ ಸೊಬಗು ಯಾವತ್ತೂ ನನ್ನನ್ನು ಹತ್ತು ನಿಮಿಷದಲ್ಲಿ ಕ್ರಮಿಸಲು ಬಿಟ್ಟಿಲ್ಲ. ನಾವಡ,ಧಾರೇಶ್ವರರ ಧಾಟಿಯಲ್ಲಿ ಭಾಗವತಿಗೆ, ಭಾವಗೀತೆಗಳು, ಹಿಂದಿ ಸಿನಿಮಾ ಹಾಡುಗಳು ಬಾಯಿಗೆ ಬಂದ ಹಾಗೆ ಒಂದರ ಮೇಲೊಂದರಂತೆ ಹಾಡುತ್ತಾ ಅಲ್ಲ ಕಿರುಚುತ್ತಾ ನಡೆಯೋದು ನನ್ನ ಅಭ್ಯಾಸ. ಈಗಲೂ ನಾನು ಮನೆಗೆ ಹೋದ್ರೆ ಊರವ್ರಿಗೆಲ್ಲ ಗೊತಾಗೋದು ಈ ಕಿರುಚಾಟದಿಂದಾನೇ. ಮನೆ ತಲುಪಿದ ಅರ್ಧಘಂಟೆಯೊಳಗೆ ಎಲ್ಲ ಬಂದು "ನಮ್ಮ ಊರಿಗೆ ಯಾರೇ ಬಂದ್ರು ನಮಗೆ ಗೊತಾಗುತ್ತೆ. ನೀನು ಕದ್ದು ಕೂತ್ರೆ ಗೊತಾಗೋಲ್ಲ ನಮಗೆ ಅಂದ್ಕೊಂಡಿದಿಯಾ? ಹೊರಗೆ ಬಾರಾ?" ಅಂತ ಒಬ್ರು ಕರದ್ರೆ ಇನ್ನೊಬ್ರು "ಯಾಕಾ ಬಂದೀ, ಅಲ್ಲಿಂದ ಬೆರೆಸಿದ್ರೇನೋ " ಅಂತಾನೋ ಇಲ್ಲಾ "ದುಡುದ್ ತಿನ್ನ್ರೋ ಅಂತಂದ್ರೆ ಈ ಹುಡುಗ್ರು ಮೂರು ಮೂರು ದಿನಕ್ಕೆ ಓಡಿ ಬರ್ತಾವಪ್ಪಾ" ಅಂತ ಹೇಳೋಕ್ ಶುರು ಮಾಡ್ತಾರೆ. ನಾನು ಉತ್ತರ ಹೇಳೋಕೆ ಮುಂಚೇನೆ ಅಪ್ಪ ಅವ್ರಿಗೆಲ್ಲ ಅವರ ಮಾತಿನ ಧಾಟಿಯಲ್ಲೇ ಉತ್ತರ ಕೊಟ್ಟು ಸುಮ್ನಾಗಿಸ್ತಾರೆ. ನನ್ನ ಕೈಲಿ ಆಗದ ಮಾತು ಬಿಡಿ....
ನನ್ನ ಬಾಲ್ಯದ ದಿನಚರಿಗೆ ಮತ್ತೆ ವಾಪಾಸಾಗ್ತೀನಿ. ದಿನಾ ಅವನ ಮನೆಗೆ ಹೋಗೋದೂ, ಒಂದು ಕಾಫೀ ಜೊತೆಗೆ ಏನಾದ್ರು ತಿನ್ನೋಕೆ. ಅಲ್ಲಿಂದ "ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ" ಅಂತ ಹಾಡುತ್ತಾ ವೈಕುಂಠಪುರದ ಕಡೆಗೆ ಒಂದು ಸಣ್ಣ ವಾಕಿಂಗ್. ಅಲ್ಲಿಂದ ಮತ್ತೆ ನಮ್ಮ ಮನೆಯ ದಟ್ಟಡವಿಯ ಹಾದಿಗೆ ವಾಪಾಸಾಗಿ ನಮ್ಮ ಕಟ್ಟೆ ಪುರಾಣ ಶುರು ಮಾಡ್ತಿದ್ವಿ. ವೇದ, ಉಪನಿಷತ್ ಗಳಿಂದ ಹಿಡಿದು ಪೇಟೆಯ ಪಡ್ಡೆ ಹುಡುಗರ ದುರ್ಗುಣಗಳು ಎಲ್ಲ ನಮ್ಮ ಚರ್ಚೆಯಲ್ಲಿ ಬರ್ತಿದ್ವು. ಕೆಲವೊಮ್ಮೆ ರಾತ್ರಿ ಹನ್ನೊಂದು ಘಂಟೆ ಆದ್ರು ನಮ್ಮ ಮಾತು ಮುಗೀತಿರ್ಲಿಲ್ಲ. ಮನೆಗೆ ಹೊರಡುವಾಗ ಇಬ್ರು ಹೇಳ್ಕೊಳೋದಿತ್ತು. "ಏನು ಮಾತಾಡಿದ್ವೋ ಇಷ್ಟೊತ್ತು " ಅಂತ, ಆದ್ರೆ ಇಬ್ರಿಗು ನೆನಪಿರ್ತಿರ್ಲಿಲ್ಲ.
ಈಗ ಇದು ಬರಿ ನೆನಪು ಮಾತ್ರ. ತಿಂಗಳಲ್ಲಿ ಒಮ್ಮೆ ಮಾತಾಡೋದು ಕಷ್ಟ. . ಜೀವನದ ನದಿಯಲ್ಲಿ ಇಬ್ರು ಕೊಚ್ಚಿ ಹೋಗಿಬಿಟ್ಟಿದಿವಿ. ಪ್ರವಾಹ ನಮ್ಮನ್ನ ಮನೆಯಿಂದ ಬಹುದೂರ ಎಳೆತಂದಿದೆ. ಇದು ಹೊಟ್ಟೆಪಾಡಲ್ಲ ಸ್ವಾಮಿ, ದುರಾಸೆ. ಒಂದಂತು ತಪ್ಪು ಮಾಡಿ ಕಳಕೊಂಡ್ವಿ ಆದ್ರೆ ಈ ಸ್ನೇಹವಾದರೂ ಕೊನೆತನಕ ಉಳಿಯಲಿ ಅನ್ನೋ ಆಸೆ.
ಬುಧವಾರ, ಜೂನ್ 9, 2010
ಸಾವಿರದ ಶರಣು
ಏಕನೆಂಬರು, ಅನೇಕನೆಂಬರು,
ಎಲ್ಲೆಲ್ಲು ಇಹನೆಂಬರು,
ಅವನನು ತೋರ್ವ ಗುರುವು ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,
ಕಷ್ಟದೊಳ್ ಸಾವಿರ ಉಪಾಯ ಪೇಳುತ,
ನೂಲನಡಿಗೆ ಸಂಸಾರ ಇದೆಂಬರು,
ಹೆಜ್ಜೆಗೆ ಹೆಜ್ಜೆ ಸೇರಿಸೊ ಬಂಧು ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,
ಎನ್ನಯ ಮೂಳೆ ಚಾಣವಾಗಿಸಿ
ಬಂಡೆಯ ಕೆತ್ತಿ ವಿಗ್ರಹ ಮಾಳ್ಪೆ
ಪ್ರಾಣವನೀವ ದೈವ ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,
ನಂದಾದೀಪ ಆರುವವರೆಗೆ
ನೀಡುವೆ ಆನಂದ ನಿಮಗೆ
ಎನ್ನಯ ಚಿತೆಯೂ ಸಂತಸವಿತ್ತೆಡೆ
ಸಾವಿರ ಪ್ರಣಾಮ ಶಿವಗೆ,
ಎಲ್ಲೆಲ್ಲು ಇಹನೆಂಬರು,
ಅವನನು ತೋರ್ವ ಗುರುವು ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,
ಕಷ್ಟದೊಳ್ ಸಾವಿರ ಉಪಾಯ ಪೇಳುತ,
ನೂಲನಡಿಗೆ ಸಂಸಾರ ಇದೆಂಬರು,
ಹೆಜ್ಜೆಗೆ ಹೆಜ್ಜೆ ಸೇರಿಸೊ ಬಂಧು ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,
ಎನ್ನಯ ಮೂಳೆ ಚಾಣವಾಗಿಸಿ
ಬಂಡೆಯ ಕೆತ್ತಿ ವಿಗ್ರಹ ಮಾಳ್ಪೆ
ಪ್ರಾಣವನೀವ ದೈವ ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,
ನಂದಾದೀಪ ಆರುವವರೆಗೆ
ನೀಡುವೆ ಆನಂದ ನಿಮಗೆ
ಎನ್ನಯ ಚಿತೆಯೂ ಸಂತಸವಿತ್ತೆಡೆ
ಸಾವಿರ ಪ್ರಣಾಮ ಶಿವಗೆ,
ಮಂಗಳವಾರ, ಮೇ 4, 2010
ಪ್ರಾಣಾಪಾನ ಸಂಕಟ
ಹೃದಿ ಪ್ರಾಣೋ ಗುದೇSಪಾನ: ಸಮಾನೋ ನಾಭಿಸಂಸ್ಥಿತ:!
ಉದಾನ: ಕಂಠದೇಶಸ್ಥೋ ವ್ಯಾನ: ಸರ್ವಶರೀರಣ:!!
Actually I didn’t know the meaning of the verse which we chant before taking food, until I come across aforementioned shloka in the book TARKA SANGRAHA by Annambhatta. Thought of sharing with you all.
The air that is inhaled and exhaled through the nostrils and the mouth (sometime) is Prana and is located in the heart. The air that presses down water, waste matter, foetus etc is Apana and is located in the anus. Samana helps in the digestion of the food etc by stimulating gastric fire in the stomach and is located in the region of navel. Udana takes the digested food etc upward from navel and which located in throat and enters into the head. Vyana is the vital air that courses through the entire nevous system and is diffused through the whole body.
ಉದಾನ: ಕಂಠದೇಶಸ್ಥೋ ವ್ಯಾನ: ಸರ್ವಶರೀರಣ:!!
Actually I didn’t know the meaning of the verse which we chant before taking food, until I come across aforementioned shloka in the book TARKA SANGRAHA by Annambhatta. Thought of sharing with you all.
The air that is inhaled and exhaled through the nostrils and the mouth (sometime) is Prana and is located in the heart. The air that presses down water, waste matter, foetus etc is Apana and is located in the anus. Samana helps in the digestion of the food etc by stimulating gastric fire in the stomach and is located in the region of navel. Udana takes the digested food etc upward from navel and which located in throat and enters into the head. Vyana is the vital air that courses through the entire nevous system and is diffused through the whole body.
ಸೋಮವಾರ, ಮಾರ್ಚ್ 22, 2010
ಪದಬಂಧ
(ಮಾದ್ವ ಹಾಸ್ಟೆಲ್ ನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪದಬಂಧ ಸ್ಪರ್ಧೆಗಾಗಿ ತಯಾರಿಸಿದ್ದು -೨೦೦೬)

ಎಡದಿಂದ ಬಲಕ್ಕೆ
1. ನೂಲು ಹಿಡಿದು ನ್ಯಾಯಾಲಯಕ್ಕೆ ಬಂದ ಫಿರ್ಯಾದಿ. (4)
3. ರಾಮಪುತ್ರ ಬಂದು ಕ್ಷೇಮಸಮಾಚಾರ ವಿಚಾರಿಸಿದನೆ? (3)
6. ರಣವಲ್ಲದ್ದು, ಕಾಡಗಿದೆ. (3)
7. ಶಾಖದೊಂದಿಗೆ ಮರ್ಯಾದೆ ಸೇರಿ ಉಷ್ಣತೆಯಾಗಿದೆ. (4)
9. ಮನುಷ್ಯನಲ್ಲಿ ಹುಟ್ಟಿದುದು ಸಮಸ್ತರಿಗೂ ತಿಳಿದಿದೆ. (5)
11. ಲವ ತಂದ ಉಪ್ಪು. (3)
13. ಹರನು ಮಧ್ಯೆ ಕುಳಿತು ಸಮಯ ವ್ಯರ್ಥ ಮಾದಿದನೇ? (5)
16. "ಯಾವಾಗಲೂ" ಎನ್ನುವುದನ್ನು ಹೀಗೂ ಹೇಳಬಹುದೇ? (5)
19. ಅರಸ ಬರುತ್ತಿದ್ದಾನೆ ಅವನನ್ನು ಹೊಗಳಿ (ಪರಾಕು) (7)
21. ಬಾಣದೊಂದಿಗೆ ಬಂದ ರಷ್ಯಾದ ಟೆನ್ನಿಸ್ ಆಟಗಾರ್ತಿ. (4)
ಮೇಲಿನಿಂದ ಕೆಳಕ್ಕೆ.
1. ಕೈಗಳ ಮಧ್ಯೆ ಅವತರಿಸಿದ ಚಿನ್ನ. (4)
2. ಶೀರ್ಷಾಸನ ಹಾಕಿದ "ವೈಶ್ರವಣ" ಉತ್ತರ ದಿಕ್ಕಿನ ಅಧಿಪತಿ.(3)
4. ಬಳ್ಳಿಯೊಂದಿಗೆ ಸಿಕ್ಕ ಹಣ್ಣು. (4)
5. ಅಂಜನ ಹಾಕಿಕೊಂಡು ಏರಿದ ಕಟಕಟೆ (4)
6. ಎಣ್ಣೆ ಹಚ್ಚಿ ಮಾಡಿದ ಸ್ನಾನ (4)
8. ಯುದ್ದಭೂಮಿಯಲ್ಲಿ ಮಾಡಿದ ಹೋಮ (3)
10. ಶೀರ್ಷಾಸನ ಹಾಕಿದ ಕಾರ್ಮೋಡದ ಸಾಲುಗಳು (4)
12. ದಾನಶೂರ ಕರ್ಣನ ಈ ಹೆಸರು ಪೃಥ್ವಿಯನ್ನು ಸೀಳಿ ಬಂದಿದೆ. (4)
14. ಇಂದ್ರನಿಂದ ಕೆಳದವಡೆಗೆ ಪೆಟ್ಟುತಿಂದರೂ ಅನುಮಾನವಿಲ್ಲ, ಈತ ಪರಾಕ್ರಮಿ. (4)
15. "ಬಚ್ಚ" ನಲ್ಲದಿದ್ದರೂ ಖ್ಯಾತ. ಈತ ತಲೆಕೆಳಗಾದ ಹಿಂದಿ ನಟ. (4)
17. ನರಿಯಲ್ಲಿರುವ ವಿಷ್ಣು. (4)
18. ವೃಕ್ಷದ ನಡುವೆ ಬಂದ ಬದಲಾವಣೆಯ ಕಾಲ ತಲೆಕೆಳಗಾಗಿದೆ. (4)
20. ರಂಗನಾಯಕನ ಪತ್ನಿಯಾದ ಲಕ್ಶ್ಮಿಯು ಆತನನ್ನು "ಕಮಲದ ಕಣ್ಣು"ಳ್ಳವನೇ ಎಂದು ಸಂಭೋದಿಸಿ ಎಬ್ಬಿಸುತ್ತಿದ್ದಾಳೆ.(ತಲೆಕೆಳಗಾಗಿದೆ) (6)
ಎಡದಿಂದ ಬಲಕ್ಕೆ
1. ನೂಲು ಹಿಡಿದು ನ್ಯಾಯಾಲಯಕ್ಕೆ ಬಂದ ಫಿರ್ಯಾದಿ. (4)
3. ರಾಮಪುತ್ರ ಬಂದು ಕ್ಷೇಮಸಮಾಚಾರ ವಿಚಾರಿಸಿದನೆ? (3)
6. ರಣವಲ್ಲದ್ದು, ಕಾಡಗಿದೆ. (3)
7. ಶಾಖದೊಂದಿಗೆ ಮರ್ಯಾದೆ ಸೇರಿ ಉಷ್ಣತೆಯಾಗಿದೆ. (4)
9. ಮನುಷ್ಯನಲ್ಲಿ ಹುಟ್ಟಿದುದು ಸಮಸ್ತರಿಗೂ ತಿಳಿದಿದೆ. (5)
11. ಲವ ತಂದ ಉಪ್ಪು. (3)
13. ಹರನು ಮಧ್ಯೆ ಕುಳಿತು ಸಮಯ ವ್ಯರ್ಥ ಮಾದಿದನೇ? (5)
16. "ಯಾವಾಗಲೂ" ಎನ್ನುವುದನ್ನು ಹೀಗೂ ಹೇಳಬಹುದೇ? (5)
19. ಅರಸ ಬರುತ್ತಿದ್ದಾನೆ ಅವನನ್ನು ಹೊಗಳಿ (ಪರಾಕು) (7)
21. ಬಾಣದೊಂದಿಗೆ ಬಂದ ರಷ್ಯಾದ ಟೆನ್ನಿಸ್ ಆಟಗಾರ್ತಿ. (4)
ಮೇಲಿನಿಂದ ಕೆಳಕ್ಕೆ.
1. ಕೈಗಳ ಮಧ್ಯೆ ಅವತರಿಸಿದ ಚಿನ್ನ. (4)
2. ಶೀರ್ಷಾಸನ ಹಾಕಿದ "ವೈಶ್ರವಣ" ಉತ್ತರ ದಿಕ್ಕಿನ ಅಧಿಪತಿ.(3)
4. ಬಳ್ಳಿಯೊಂದಿಗೆ ಸಿಕ್ಕ ಹಣ್ಣು. (4)
5. ಅಂಜನ ಹಾಕಿಕೊಂಡು ಏರಿದ ಕಟಕಟೆ (4)
6. ಎಣ್ಣೆ ಹಚ್ಚಿ ಮಾಡಿದ ಸ್ನಾನ (4)
8. ಯುದ್ದಭೂಮಿಯಲ್ಲಿ ಮಾಡಿದ ಹೋಮ (3)
10. ಶೀರ್ಷಾಸನ ಹಾಕಿದ ಕಾರ್ಮೋಡದ ಸಾಲುಗಳು (4)
12. ದಾನಶೂರ ಕರ್ಣನ ಈ ಹೆಸರು ಪೃಥ್ವಿಯನ್ನು ಸೀಳಿ ಬಂದಿದೆ. (4)
14. ಇಂದ್ರನಿಂದ ಕೆಳದವಡೆಗೆ ಪೆಟ್ಟುತಿಂದರೂ ಅನುಮಾನವಿಲ್ಲ, ಈತ ಪರಾಕ್ರಮಿ. (4)
15. "ಬಚ್ಚ" ನಲ್ಲದಿದ್ದರೂ ಖ್ಯಾತ. ಈತ ತಲೆಕೆಳಗಾದ ಹಿಂದಿ ನಟ. (4)
17. ನರಿಯಲ್ಲಿರುವ ವಿಷ್ಣು. (4)
18. ವೃಕ್ಷದ ನಡುವೆ ಬಂದ ಬದಲಾವಣೆಯ ಕಾಲ ತಲೆಕೆಳಗಾಗಿದೆ. (4)
20. ರಂಗನಾಯಕನ ಪತ್ನಿಯಾದ ಲಕ್ಶ್ಮಿಯು ಆತನನ್ನು "ಕಮಲದ ಕಣ್ಣು"ಳ್ಳವನೇ ಎಂದು ಸಂಭೋದಿಸಿ ಎಬ್ಬಿಸುತ್ತಿದ್ದಾಳೆ.(ತಲೆಕೆಳಗಾಗಿದೆ) (6)
ಬುಧವಾರ, ಮಾರ್ಚ್ 17, 2010
ಪಂಚಾಂಗ.
ತಿಥ್ಯೇಶ್ಚ ಶ್ರೀಯಮಾಪ್ನೋತಿ ವಾರಾತ್ ಆಯುಷ್ಯವರ್ಧನಮ್ !
ನಕ್ಷತ್ರಾತ್ ಹರತೇ ಪಾಪಮ್ ಯೋಗಾತ್ ರೋಗನಿವಾರಣಮ್ !
ಕರಣಾತ್ ಕಾರ್ಯಸಿದ್ದಿಶ್ಚಾತ್ ಪಂಚಾಂಗಂ ದಶಮೇ ಫಲಮ್ !!
ವಿಕೃತಿ ಸಂವತ್ಸರದ ಪಂಚಾಂಗವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
www.sringeri.net/wp-content/uploads/2010/02/2010_kannada.pdf
ನಕ್ಷತ್ರಾತ್ ಹರತೇ ಪಾಪಮ್ ಯೋಗಾತ್ ರೋಗನಿವಾರಣಮ್ !
ಕರಣಾತ್ ಕಾರ್ಯಸಿದ್ದಿಶ್ಚಾತ್ ಪಂಚಾಂಗಂ ದಶಮೇ ಫಲಮ್ !!
ವಿಕೃತಿ ಸಂವತ್ಸರದ ಪಂಚಾಂಗವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
www.sringeri.net/wp-content/uploads/2010/02/2010_kannada.pdf
ಮಂಗಳವಾರ, ಮಾರ್ಚ್ 16, 2010
ನಂಬಬೇಡಿರೋ...
ನಂಬಬೇಡಿ ನಾರಿಯರನು ಹಂಬಲ ಹಾರೈಸಬೇಡಿ ಪ
ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ಅ
ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ್ನೆ
ನೋಟವೆಲ್ಲ ಘನ್ನ ಘಾತಕ ಕೂಟವೆಲ್ಲ ವಂಚನೆ
ಪಾಟುಗೆಟ್ಟು ಹೆಂಗಳೊಡನೆ ಕೋಟಲೆಗೊಂಡು ತಿರುಗಬೇಡಿ
ನೀಟುಗಾರತಿಯರೊಲುಮೆ ಬೂಟಕವೆಂಡು ತಿಳಿಯಿರೊ
ಸೋತೆನೆಂದು ವಿಟಗೆ ದೈನ್ಯ ಮಾತನಾಡಿ ಮರುಳುಗೊಳಿಸಿ
ಕಾತರವನು ಕೊಟ್ಟು ಅವನ ಮಾತಾಪಿತರ ತೊಲಗಿಸಿ
ಪ್ರೀತಿಪಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಜಾತಿಕಾರ ಹೆಂಗಳ
ಧರಣಿಜನರು ಕೇಳಿ ಲೇಶ ಕರುಣವಿಲ್ಲ ನಾರಿಯರಿಗೆ
ಎರಳೆಕಂಗಳ ಹೆಂಗಳೊಲುಮೆ ಬರೆಹ ನೀರಮೇಲಿನ
ಸರಸಮುಖಿಯರಿರವ ನೀವು ಬರಿದೆ ನಂಬಿ ಕೆಡಲುಬೇಡಿ
ಗುರುಪುರಂದರ ವಿಠಲರಾಯನ ಚರಣವ ನಂಬಿ ಬದುಕಿರೊ
(ಕ್ರುಪೆ- http://haridasa.sampada.ನೆಟ್ )
ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ಅ
ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ್ನೆ
ನೋಟವೆಲ್ಲ ಘನ್ನ ಘಾತಕ ಕೂಟವೆಲ್ಲ ವಂಚನೆ
ಪಾಟುಗೆಟ್ಟು ಹೆಂಗಳೊಡನೆ ಕೋಟಲೆಗೊಂಡು ತಿರುಗಬೇಡಿ
ನೀಟುಗಾರತಿಯರೊಲುಮೆ ಬೂಟಕವೆಂಡು ತಿಳಿಯಿರೊ
ಸೋತೆನೆಂದು ವಿಟಗೆ ದೈನ್ಯ ಮಾತನಾಡಿ ಮರುಳುಗೊಳಿಸಿ
ಕಾತರವನು ಕೊಟ್ಟು ಅವನ ಮಾತಾಪಿತರ ತೊಲಗಿಸಿ
ಪ್ರೀತಿಪಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಜಾತಿಕಾರ ಹೆಂಗಳ
ಧರಣಿಜನರು ಕೇಳಿ ಲೇಶ ಕರುಣವಿಲ್ಲ ನಾರಿಯರಿಗೆ
ಎರಳೆಕಂಗಳ ಹೆಂಗಳೊಲುಮೆ ಬರೆಹ ನೀರಮೇಲಿನ
ಸರಸಮುಖಿಯರಿರವ ನೀವು ಬರಿದೆ ನಂಬಿ ಕೆಡಲುಬೇಡಿ
ಗುರುಪುರಂದರ ವಿಠಲರಾಯನ ಚರಣವ ನಂಬಿ ಬದುಕಿರೊ
(ಕ್ರುಪೆ- http://haridasa.sampada.ನೆಟ್ )
ಶುಕ್ರವಾರ, ಮಾರ್ಚ್ 12, 2010
ತಾಂಗದಿನ್ನ ದಿನ್ನ ದೀಮ್
ಗಜಮುಖ ನಾ ನಿನ್ನ ಪಾದವ ನೆನವೆ,
ಪ್ರತಿಯಾಗಿ ಕರುಣಿಸು ವರಗಳ ಪ್ರಭುವೇ.....
ಆ ಹಾಡಿಗೆ ಮನ ಸೋತು ಹೋಯಿತು. ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಮಲಗಿದವನು ನಿದ್ದೆಲೂ ಇದೇ ಹಾಡು. ಎಚ್ಚರ ಆದಮೆಲೆ ನೋಡ್ತಿನೀ, ಎಲ್ಲರೂ ನನ್ನನ್ನ ನೋಡಿ ನಗ್ತಾ ಇದಾರೆ. ಏನಾಯ್ತಪ್ಪ ಅಂತ ಮೊದಲು ಚಡ್ಡಿ ಕಡೆ ನೋಡ್ಕೊಂಡೆ. ಒದ್ದೆ ಆಗಿಲ್ಲ. ಮತ್ತೇನು ಅಂತ ಕಣ್ಣು ಬಾಯಿ ಬಿಟ್ಕೊಂಡು ಅಮ್ಮನ ಮುಖ ನೋಡಿದೆ. ಅವಳು ನಗ್ತಾ ಇದ್ದಳು. (ನಮ್ಮ ಕಡೆ ಎಲ್ಲ ಅಮ್ಮಂಗೆ ನೀನು ಅಂತಾನೆ ಕರೆಯೋದು. ಮಹಿಳ ಮೀಸಲಾತಿ ಬಗ್ಗೆ ದನಿ ಎತ್ತಬೇಡಿ ಮಾರಾಯ್ರೆ, ನಮಗೆ ಸ್ವಲ್ಪ ಅಮ್ಮನ ಮೇಲೆ ಪ್ರೀತಿ ಜಾಸ್ತಿ ಅಷ್ಟೆ.). ನನ್ನ ಸ್ಥಿತಿ ನೋಡಿ ಅವಳಿಗೆ ಪಾಪ ಅನ್ನಿಸ್ತೋ ವಿಷಯ ಹೇಳೋ ಕ್ರುಪೆ ತೋರಿದ್ಲು. ಎಂತದೋ ಮಾರಾಯಾ ಮಲಗಿದವನಿಗೆ ಏನಾಯ್ತು? ಕಾಳಿಂಗ ನಾವಡ ಮೈಮೇಲೆ ಬಂದಿದ್ನಾ ಅಂದ್ಲು. (ಆಗಿನ್ನೂ ಎಲ್ಲರು ಮಾತಾಡ್ಕೊಳ್ತಿದ್ದ ಕಾಲ - "ಲೋ ಸೂರು ಕೇಳಿದ್ಯೇನೊ ನಾವಡ ಹೋದ್ನಂತೆ ಮಾರಾಯ" ಅಂತ ಅಪ್ಪ ಹೇಳಿದ್ದನ್ನ ಕೇಳಿದ್ದೆ. ಆದರೆ ಅವರ್ಯಾರು ಅಂತ ಗೊತ್ತಿರಲಿಲ್ಲ.) ಅಮ್ಮ ಮತ್ತೆ ಬಿಡಿಸಿ ಹೇಳಿದ್ಲು. ನಿದ್ದೇಲೂ ಭಾಗವತಿಗೆ ಮಾಡ್ತಿದ್ಯಲ್ಲೋ ಮಗನೇ ಯಕ್ಷಗಾನ ಪೂರ್ತಿ ನೋಡಿದ್ಯಾ ಅಂದ್ಲು. ಹ್ನೂಂ ಅಂದೆ. ಆಮೇಲೆ ಒಂದೆರಡು ತಿಂಗಳು ಕೂತಲ್ಲಿ ನಿಂತಲ್ಲಿ ಇದೇ ಹಾಡು. ಅಪ್ಪನ ಕೈಲಿ ಬೈಸಿಕೊಂಡಿದ್ದು ಆಯಿತು. ಆದ್ರೆ ಇವತ್ತಿಗು ನಾವಡ ಮೈಮೇಲೆ ಬರೋದು ಮಾತ್ರ ನಿಲ್ಲಲಿಲ್ಲ.
ಇದೆಲ್ಲ ನಡೆದಿದ್ದು ನಾನು ಮೂರನೇ ಕ್ಲಾಸ್ ನಲ್ಲಿದ್ದಾಗ. ಅಪ್ಪ ಒಂದಿನ ಬೆಳಿಗ್ಗೆ ಅಮ್ಮನ ಹತ್ರ ಹೇಳ್ತಾ ಇದ್ದರು. ನಾನು ಅಲ್ಲೆ ಒಲೆ ಬುಡದಲ್ಲಿ ಚಳಿ ಕಾಯಿಸ್ತಾ ಕೂತಿದ್ದೆ. "ಯೆ ಇವತ್ತು ಸಂಜೆ ಯಕ್ಷಗಾನ ಇದ್ಯಲೇ? ಹೋಗೋಣ ರಾತ್ರಿ ಅಡುಗೆ ಬೇಗ ಮಾಡು" ಅಮ್ಮಂಗೆ ಅಂತಾ ಏನು ಆಸಕ್ತಿ ಇದ್ದ ಹಾಗೆ ಕಾಣ್ಲಿಲ್ಲ. ಚಿಟ್ಟಾಣಿ ಬರ್ತಿದಾನಂತೆ, ಸ್ವಲ್ಪ ಹೊತ್ತು ನೋಡಿ ಬರೋಣ. ಮಕ್ಕಳಿಗೂ ಒಂದು ಹೊಸತು ಅಂತ ಒತ್ತಿ ಹೇಳಿದ ಮೇಲೆ ಅಮ್ಮ ಒಪ್ಪಲೇಬೇಕಾಯಿತು. ನಂಗೆ ಅವತ್ತಿಡಿ ಏನೋ ಖುಶಿ. ಸಂಜೆ ಆಗುವುದಕ್ಕೇ ಕಾಯ್ತಾ ಇದ್ದ ನಾನು ಕ್ಲಾಸ್ ಮುಗಿಸಿ ನಲವತ್ತೇ ನಿಮಿಷಕ್ಕೆ ಮನೆ ಸೇರಿದ್ದೆ. ನಲವತ್ತೇ ನಿಮಿಷ ಯಾಕೆ ಅಂತಾನ? ಸ್ವಾಮಿ ನಾನು ಇರೋದು ಮಲೆನಾಡಿನ ಒಂದು ಹಳ್ಳಿ ಮೂಲೇಲಿ. ದಿನಾ ಕಿಲೋಮೀಟರ್ ಗಟ್ಟಲೆ ನಡೆದು ಶಾಲೆ ಸೇರಬೇಕಿತ್ತು. ನಮ್ಮೂರನಲ್ಲಿ ಒಂದು ವಿಶೇಷ ಅಂದ್ರೆ ಇಡೀ ಊರಿಗೆ ಒಂದೇ ಮನೆ. "ಅದೂ ಒಂದು ಊರ?" ಅಂತ ಯಾರಾದ್ರು ಕೇಳಿದ್ರೆ ಏನನ್ನಬೇಕು ಅಂತ ನಂಗೂ ಗೊತಾಗೋಲ್ಲ.
ಮನೆಗೆ ಬರ್ತಿದ್ದ ಹಾಗೆ ಅಮ್ಮನ ಹತ್ರ ಅಕ್ಕಂದಿರ ಕಂಪ್ಲೆಂಟ್.
"ಅಮ್ಮ ಅವನು ಮುಂದೆ ಮುಂದೆ ಓಡ್ತಾ ಇದ್ದ ಕೈ ಹಿಡ್ಕೊಂಡ್ರು ನಮ್ಮನ್ನೇ ಎಳ್ಕೊಂಡು ಹೋಗ್ತಾ ಇದ್ದ."
"ಯಾಕೋ ಅವ್ರೊಟ್ಟಿಗೆ ಸುಮ್ನೆ ಬಂದ್ರೆ ಏನಾಗುತ್ತೊ ನಿಂಗೆ" ಅಂತ ಬೈದು ಕೆಲಸದಲ್ಲಿ ತೊಡಗಿದಳು.
ಅಮ್ಮನ ಹಿಂದೆ ಮುಂದೇನೆ ಸುತ್ತಿ ಅಂತೂ ರಾತ್ರಿ ಊಟನೂ ಅರೆ ಬರೆ ಮುಗ್ಸಿ ಹೊರಟಿದ್ದಾಯ್ತು.
ದೇವಸ್ಥಾನದ ಬಯಲಿನಲ್ಲಿ ಆಟಕ್ಕೆ ಬೇಕಾದ ಎಲ್ಲ ಸಿದ್ದತೆ ಮಾಡಲಾಗಿತ್ತು.ಎಲ್ಲ ಮಾತಾಡ್ಕೊಳ್ತಾ ಇದ್ರು "ಪ್ರಸಂಗ ಶನಿ ಮಹಾತ್ಮೆ ಅಂತೆ, ಚಿಟ್ಟಾಣಿ ಬರ್ತಾರಂತೆ" ನಂಗೆ ಏನು ಅರ್ಥ ಆಗ್ತಾ ಇರ್ಲಿಲ್ಲ. ಅಷ್ಟರಲ್ಲಿ ರಂಗ ಮಂಟಪದ ತೆರೆ ಸರಿಸಲಾಯಿತು. ಅಪ್ಪ ನಂಗೆ ಎಲ್ಲ ವಿವರಿಸಿ ಹೇಳಿದ್ರು . ಅದು ಚಂಡೆ, ತಾಳಾ, ಅವರು ಭಾಗವತರು, ಈಗ ಪಾತ್ರದಾರಿಗಳು ಬರ್ತಾರೆ ಹೀಗೆ ಎಲ್ಲಾ.... ಮೊದಲ ಬಾರಿಗೇ ನನಗೆ ತುಂಬಾ ಖುಶಿ ಆಗಿತ್ತು. ಯಕ್ಷಗಾನದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿದ್ದೆ. ಚಿಟ್ಟಾಣಿ ಅವರ ನೃತ್ಯ, ಅವರ ಸಂಭಾಷಣೆ, ಪ್ರತಿಯೊಂದು ರಸಗಳನ್ನ ವ್ಯಕ್ತಪಡಿಸುವ ರೀತಿ ಅದ್ಭುತ, ಈಗಲೂ ಅದು ನೆನಪಾಗ್ತಿರುತ್ತೆ.
ರಂಗ ನಾಯಕ ರಾಜೀವ ಲೋಚನ
ರಮಣ ನೀ ಬೆಳಗಾಯಿತೇಳೆನ್ನುತಾ.....
ತಾಂಗದಿನ್ನ ದಿನ್ನ ದೀಮ್
ಎಂದು ಮಂಗಳ ಹಾಡಿದ್ರೂ ನನಗೆ ಏಳೋಕೆ ಮನಸ್ಸೇ ಇರ್ಲಿಲ್ಲ. ಮಾರನೇ ದಿನ ನಮಗೆ ದೂರದಲ್ಲೆಲ್ಲೊ ಯಕ್ಶಗಾನ ನಡೀತಿದಿಯೇನೋ ಅಂತ ಅನ್ನುಸ್ತಿತ್ತು. ನಾನು ಮತ್ತೆ ನನ್ನ ಅಕ್ಕ ಇಬ್ರು ರಾತ್ರಿ ಯಕ್ಷಗಾನ ನಡಿತಾ ಇದ್ದ ಜಾಗಕ್ಕೆ ಮತ್ತೊಂದ್ಸರಿ ಹೋಗಿ ನೋಡ್ಕೊಂಡು ಬಂದಿದ್ವಿ...
ಗುರುವಾರ, ಮಾರ್ಚ್ 4, 2010
ನನ್ನ (ಅ)ವಳು
ಒಂದೇ ಬಾರಿ ನನ್ನ ನೋಡಿ ಮಂದ ನಗೀ ಹಾಂಗ ಬೀರಿ
ಮುಂದ ಮುಂದ ಮುಂದಾ ಹೋದ ಹಿಂದ ನೋಡದ ಗೆಳತೀ ಹಿಂದ ನೋಡದ...........
ಗೆಳತಿ ಕಿವಿಯಲ್ಲಿ ನೀನು ಪಿಸುಗುಟ್ಟಿದ್ದು ಇದೇ ಹಾಡನ್ನಾ? ಅಥವಾ ಇದು ನನ್ನ ಭ್ರಮೆನಾ? ತಿರುಗಿ ಒಮ್ಮೆ ನಿನ್ನನ್ನ ನೋಡ್ಬೇಕು ಅನ್ನಿಸ್ತಿದೆ ಕಣೇ. ಆದ್ರೆ. ಎಲ್ಲಿ ನೀನು ತಪ್ಪು ತಿಳೀತಿಯೇನೋ ಅನ್ನೋ ಭಯ. ಆಗ್ಲೆ ಮೂರು ಸಾರಿ ಮುಗ್ಗರಿಸಿಬಿಟ್ಟಿದೀನಿ. ಇವನಿಗೆ ಕಣ್ಣು ಸರಿಯಿಲ್ಲ ಅಥವಾ ನಡೆಯೋಕೆ ಬರಲ್ಲ ಅಂತ ಯೋಚಿಸ್ತಿದೀಯಾ? ಇಲ್ವೇ ಇದು ನನ್ನ ತಪ್ಪಲ್ಲ. ದೇವರು ನಂಗೆ ಎಲ್ಲೂ ಮೋಸ ಮಾಡಿಲ್ಲ. ಇದಕ್ಕೆ ಕಾರಣ ಅವನು ನಿಂಗೆ ಕೊಟ್ಟಿರೊ ಸೌಂದರ್ಯದ ಒಡವೆ. ನಿನ್ನ ತುಟಿಯಂಚಿನ ನಗು, ಮೋಹಕ ನೋಟ,....ಸಾಕು ಸಾಕು ನಾನು ಹೇಳ್ತಾ ಹೋದ್ರೆ ನಿಂಗೆ ಜಂಭ ಬಂದುಬಿಡುತ್ತೆ.
ಇನ್ನು ಎರಡು ಹೆಜ್ಜೆ ಮುಂದೆ ಹೋದ್ರೆ ತಿರುವು ಬಂದುಬಿಡುತ್ತೆ. ಆದ್ರೆ ನನ್ನ ಜೀವನ ಆಗ್ಲೆ ತಿರುವು ಪಡ್ಕೊಂಡುಬಿಟ್ಟಿದೆ ಕಣೆ. ನಂಗೆ ಈ ತಿರುವು ನಿನ್ನ ಕೈ ಹಿಡ್ಕೊಂಡು ದಾಟೋ ಆಸೆ. ಒಮ್ಮೆ ತಿರುಗಿ ನೋಡ್ಲಾ? ನೀನು ಅಲ್ಲೆ ನನ್ನ ನೋಡ್ತಾ ನಿಂತಿದಿಯಾ ಅಂತ ಮನಸ್ಸು ಹೇಳ್ತಿದೆ. ಅಮಿತಾಬ್ ತರ ಒಮ್ಮೆ ಹಾಡಿ ನಿನ್ನ ಒಲಿಸಿಕೊಳ್ಳಲಾ?
ಕಭೀ ಕಭೀ ಮೆರೆ ದಿಲ್ ಮೆ ಕಯಾಲ್ ಆತಾ ಹೈ...
ತುಜೇ ಜಮೀ ಪೆ ಬುಲಾಯಾ ಗಯಾ ಹೈ ಮೇರೆ ಲಿಯೆ...
ಉಹ್ನುಂ ಇದು ಹೇಳೋಣ ಅಂದ್ರೆ ಆ ಸಿನೆಮಾದಲ್ಲಿ ಅಮಿತಾಬ್ ಗೆ ಅವಳು ಸಿಗೋದಿಲ್ಲ. ಅದಕ್ಕೆ ನಿನ್ನನ್ನು ಕಳ್ಕೊಳೊ ಭಯ. ನಿನ್ನ ಪಡ್ಕೊಳೋಕ್ ಮುಂಚೆನೆ ನಿನ್ನ ನನ್ನವಳು ಅನ್ನೋ ತರ ಯೋಚಿಸ್ತಿದೀನಿ. ಕಳ್ಕೊಂಡು ಬಿಡ್ತಿನೇನೋ ಅನ್ನೋ ಭಯ ಬೇರೆ. ತಿರುವು ದಾಟೋ ಮುಂಚೆ ಹಿಂತಿರುಗಿ ಒಮ್ಮೆ ನೋಡ್ಲಾ? ನಿನ್ನ ಹೆಜ್ಜೆ ಸದ್ದು ಕೇಳಿಸ್ತಾ ಇದೆ. ಆದ್ರೆ ಅದರ ಸಪ್ಪಳ ನನ್ನಿಂದ ದೂರಾಗ್ತಾ ಇದೆ ಅನ್ನಿಸ್ತಿದೆ.
ಓ ಲಲನೆ, ಸುಮ ನಯನೆ
ನಿಲ್ಲು ನುಡಿ ಕೇಳ್ ಚಂದಿರ ವದನೆ!!
ನಾ ತಳೆದಿಹೆ ನಿನ್ನಲ್ಲಿ ಬಲು ಘನ ಪ್ರೇಮ
ಒಲವಿಂದಲಿ ನೀ ತಿಳುವೈ ಈ ಮನವ!!
....ಧಾರೇಶ್ವರರ ತರಹ ಹಾಡಿ ಬಿಡಬೇಕು ಅನ್ನಿಸ್ತಿದೆ. ಆದ್ರೆ ನನ್ನಲ್ಲಿ ಆ ಶಕ್ತಿಯಿಲ್ಲ. ನನ್ನ ಹೆಂಬೇಡಿ ಅಂತ ಅಂದ್ಕೋಬೇಡ. ಬವರವಾದರೆ ಹರನ ವದನಕೆ ಬೆವರ ತಹೆನ್ .. ಅಂತ ಹೇಳದೇ ಇದ್ರು ನನಗೆ ಹೆದರಿಕೆ ಅನ್ನೋದು ಇವತ್ತು ಬಿಟ್ಟು ಇನ್ಯಾವತ್ತು ಆಗಿದ್ದೇ ಇಲ್ಲ. ಯಾಕಂದ್ರೆ ಪುಸ್ತಕನೇ ಮುಟ್ಟದೇ ಪರೀಕ್ಷೆ ಬರೆಯೋಕೆ ಹೋಗಿದ್ದಿದೆ ಚೂರು ಭಯ ಇಲ್ಲದೆ. ಆದ್ರೆ ಇವತ್ತು....
....ತತ್ ಈ ಹಾಳು ಮೊಬೈಲ್ ಈಗಲೇ ಹೊಡ್ಕೋಬೇಕಿತ್ತಾ. ಓಹ್ ನಾನೆಲ್ಲಿದಿನಿ. ಆಗ್ಲೇ ಆ ತಿರುವು ದಾಟಿ ತುಂಬಾ ಮುಂದೆ ಬಂದಿದಿನಿ. ನೀನು ಯಾವ ಕಡೆ ಹೋದಿ ನನ್ಗೆ ಗೊತ್ತಿಲ್ಲ. ನಿನ್ನ ಹೆಸರು ಉಹ್ನುಂ ಗೊತ್ತಿಲ್ಲ. ಮತ್ತೆ ಆ ಹಾಡು..... ಆ ಹಾಡು ನೀನು ಹಾಡೋಕೆ ಹೇಗೆ ಸಾದ್ಯ? ನಾನು ಗೋವಾದಲ್ಲಿದಿನಿ ಅಂತನೂ ಮರ್ತೋಗಿತ್ತು ನೋಡು. ಆದ್ರೂ ನಿನು ನನ್ನ ತರ ಗೋವ ಅತಿಥಿ ಯಾಕಾಗಿರಬಾರದೂ????? ಮತ್ತೆ ನನ್ನ ಬಾಸ್ ಬಿ ವಿ ರಾಯರ ಆ ಮೊಬೈಲ್ ಕಾಲರ್ ಟೋನ್ ರಿಂಗಣಿಸುತ್ತಿತ್ತು
ಮುಂದ ಮುಂದ ಮುಂದಾ ಹೋದ ಹಿಂದ ನೋಡದ ಗೆಳತೀ ಹಿಂದ ನೋಡದ...........
ನಾನು ಸಂಪೂರ್ಣ ವಾಸ್ತವಕ್ಕೆ ಬಂದಿದ್ದೆ.
ಮೆ ತೊ ಚಲಾ ಜಾವೂಂಗ
ವಾಪಸ್ ನ ಆವೂಂಗಾ
ಮೆ ತೆರೀ ಗಲಿಯಾಂ ಚೋಡಕೇ ಏ ಏ ಏ ಎನ್ನುತ್ತಾ ಗೋವಾದಿಂದ ಹೊರಬಿದ್ದೆ....
ಮುಂದ ಮುಂದ ಮುಂದಾ ಹೋದ ಹಿಂದ ನೋಡದ ಗೆಳತೀ ಹಿಂದ ನೋಡದ...........
ಗೆಳತಿ ಕಿವಿಯಲ್ಲಿ ನೀನು ಪಿಸುಗುಟ್ಟಿದ್ದು ಇದೇ ಹಾಡನ್ನಾ? ಅಥವಾ ಇದು ನನ್ನ ಭ್ರಮೆನಾ? ತಿರುಗಿ ಒಮ್ಮೆ ನಿನ್ನನ್ನ ನೋಡ್ಬೇಕು ಅನ್ನಿಸ್ತಿದೆ ಕಣೇ. ಆದ್ರೆ. ಎಲ್ಲಿ ನೀನು ತಪ್ಪು ತಿಳೀತಿಯೇನೋ ಅನ್ನೋ ಭಯ. ಆಗ್ಲೆ ಮೂರು ಸಾರಿ ಮುಗ್ಗರಿಸಿಬಿಟ್ಟಿದೀನಿ. ಇವನಿಗೆ ಕಣ್ಣು ಸರಿಯಿಲ್ಲ ಅಥವಾ ನಡೆಯೋಕೆ ಬರಲ್ಲ ಅಂತ ಯೋಚಿಸ್ತಿದೀಯಾ? ಇಲ್ವೇ ಇದು ನನ್ನ ತಪ್ಪಲ್ಲ. ದೇವರು ನಂಗೆ ಎಲ್ಲೂ ಮೋಸ ಮಾಡಿಲ್ಲ. ಇದಕ್ಕೆ ಕಾರಣ ಅವನು ನಿಂಗೆ ಕೊಟ್ಟಿರೊ ಸೌಂದರ್ಯದ ಒಡವೆ. ನಿನ್ನ ತುಟಿಯಂಚಿನ ನಗು, ಮೋಹಕ ನೋಟ,....ಸಾಕು ಸಾಕು ನಾನು ಹೇಳ್ತಾ ಹೋದ್ರೆ ನಿಂಗೆ ಜಂಭ ಬಂದುಬಿಡುತ್ತೆ.
ಇನ್ನು ಎರಡು ಹೆಜ್ಜೆ ಮುಂದೆ ಹೋದ್ರೆ ತಿರುವು ಬಂದುಬಿಡುತ್ತೆ. ಆದ್ರೆ ನನ್ನ ಜೀವನ ಆಗ್ಲೆ ತಿರುವು ಪಡ್ಕೊಂಡುಬಿಟ್ಟಿದೆ ಕಣೆ. ನಂಗೆ ಈ ತಿರುವು ನಿನ್ನ ಕೈ ಹಿಡ್ಕೊಂಡು ದಾಟೋ ಆಸೆ. ಒಮ್ಮೆ ತಿರುಗಿ ನೋಡ್ಲಾ? ನೀನು ಅಲ್ಲೆ ನನ್ನ ನೋಡ್ತಾ ನಿಂತಿದಿಯಾ ಅಂತ ಮನಸ್ಸು ಹೇಳ್ತಿದೆ. ಅಮಿತಾಬ್ ತರ ಒಮ್ಮೆ ಹಾಡಿ ನಿನ್ನ ಒಲಿಸಿಕೊಳ್ಳಲಾ?
ಕಭೀ ಕಭೀ ಮೆರೆ ದಿಲ್ ಮೆ ಕಯಾಲ್ ಆತಾ ಹೈ...
ತುಜೇ ಜಮೀ ಪೆ ಬುಲಾಯಾ ಗಯಾ ಹೈ ಮೇರೆ ಲಿಯೆ...
ಉಹ್ನುಂ ಇದು ಹೇಳೋಣ ಅಂದ್ರೆ ಆ ಸಿನೆಮಾದಲ್ಲಿ ಅಮಿತಾಬ್ ಗೆ ಅವಳು ಸಿಗೋದಿಲ್ಲ. ಅದಕ್ಕೆ ನಿನ್ನನ್ನು ಕಳ್ಕೊಳೊ ಭಯ. ನಿನ್ನ ಪಡ್ಕೊಳೋಕ್ ಮುಂಚೆನೆ ನಿನ್ನ ನನ್ನವಳು ಅನ್ನೋ ತರ ಯೋಚಿಸ್ತಿದೀನಿ. ಕಳ್ಕೊಂಡು ಬಿಡ್ತಿನೇನೋ ಅನ್ನೋ ಭಯ ಬೇರೆ. ತಿರುವು ದಾಟೋ ಮುಂಚೆ ಹಿಂತಿರುಗಿ ಒಮ್ಮೆ ನೋಡ್ಲಾ? ನಿನ್ನ ಹೆಜ್ಜೆ ಸದ್ದು ಕೇಳಿಸ್ತಾ ಇದೆ. ಆದ್ರೆ ಅದರ ಸಪ್ಪಳ ನನ್ನಿಂದ ದೂರಾಗ್ತಾ ಇದೆ ಅನ್ನಿಸ್ತಿದೆ.
ಓ ಲಲನೆ, ಸುಮ ನಯನೆ
ನಿಲ್ಲು ನುಡಿ ಕೇಳ್ ಚಂದಿರ ವದನೆ!!
ನಾ ತಳೆದಿಹೆ ನಿನ್ನಲ್ಲಿ ಬಲು ಘನ ಪ್ರೇಮ
ಒಲವಿಂದಲಿ ನೀ ತಿಳುವೈ ಈ ಮನವ!!
....ಧಾರೇಶ್ವರರ ತರಹ ಹಾಡಿ ಬಿಡಬೇಕು ಅನ್ನಿಸ್ತಿದೆ. ಆದ್ರೆ ನನ್ನಲ್ಲಿ ಆ ಶಕ್ತಿಯಿಲ್ಲ. ನನ್ನ ಹೆಂಬೇಡಿ ಅಂತ ಅಂದ್ಕೋಬೇಡ. ಬವರವಾದರೆ ಹರನ ವದನಕೆ ಬೆವರ ತಹೆನ್ .. ಅಂತ ಹೇಳದೇ ಇದ್ರು ನನಗೆ ಹೆದರಿಕೆ ಅನ್ನೋದು ಇವತ್ತು ಬಿಟ್ಟು ಇನ್ಯಾವತ್ತು ಆಗಿದ್ದೇ ಇಲ್ಲ. ಯಾಕಂದ್ರೆ ಪುಸ್ತಕನೇ ಮುಟ್ಟದೇ ಪರೀಕ್ಷೆ ಬರೆಯೋಕೆ ಹೋಗಿದ್ದಿದೆ ಚೂರು ಭಯ ಇಲ್ಲದೆ. ಆದ್ರೆ ಇವತ್ತು....
....ತತ್ ಈ ಹಾಳು ಮೊಬೈಲ್ ಈಗಲೇ ಹೊಡ್ಕೋಬೇಕಿತ್ತಾ. ಓಹ್ ನಾನೆಲ್ಲಿದಿನಿ. ಆಗ್ಲೇ ಆ ತಿರುವು ದಾಟಿ ತುಂಬಾ ಮುಂದೆ ಬಂದಿದಿನಿ. ನೀನು ಯಾವ ಕಡೆ ಹೋದಿ ನನ್ಗೆ ಗೊತ್ತಿಲ್ಲ. ನಿನ್ನ ಹೆಸರು ಉಹ್ನುಂ ಗೊತ್ತಿಲ್ಲ. ಮತ್ತೆ ಆ ಹಾಡು..... ಆ ಹಾಡು ನೀನು ಹಾಡೋಕೆ ಹೇಗೆ ಸಾದ್ಯ? ನಾನು ಗೋವಾದಲ್ಲಿದಿನಿ ಅಂತನೂ ಮರ್ತೋಗಿತ್ತು ನೋಡು. ಆದ್ರೂ ನಿನು ನನ್ನ ತರ ಗೋವ ಅತಿಥಿ ಯಾಕಾಗಿರಬಾರದೂ????? ಮತ್ತೆ ನನ್ನ ಬಾಸ್ ಬಿ ವಿ ರಾಯರ ಆ ಮೊಬೈಲ್ ಕಾಲರ್ ಟೋನ್ ರಿಂಗಣಿಸುತ್ತಿತ್ತು
ಮುಂದ ಮುಂದ ಮುಂದಾ ಹೋದ ಹಿಂದ ನೋಡದ ಗೆಳತೀ ಹಿಂದ ನೋಡದ...........
ನಾನು ಸಂಪೂರ್ಣ ವಾಸ್ತವಕ್ಕೆ ಬಂದಿದ್ದೆ.
ಮೆ ತೊ ಚಲಾ ಜಾವೂಂಗ
ವಾಪಸ್ ನ ಆವೂಂಗಾ
ಮೆ ತೆರೀ ಗಲಿಯಾಂ ಚೋಡಕೇ ಏ ಏ ಏ ಎನ್ನುತ್ತಾ ಗೋವಾದಿಂದ ಹೊರಬಿದ್ದೆ....
ಮಂಗಳವಾರ, ಮಾರ್ಚ್ 2, 2010
The Speaking Tree.
No man I am not telling you about comic story in which an ancient tree which tells the people about their future. Then what is this Speaking tree all about? As some of you have already guessed, it is the same, very famous Times of India column I am talking about.
Earlier I used to switch over to a new page without even bothering to see what it is, including the articles which are published in Vijaya Karnataka or some other news papers. I used to think that these central pages are dedicated to those people who are staying alone or his/her wife/husband is deaf. No body is there to hear him. So he is sending that bloody stuff’s to local newspaper editors. Two profits of that stuff are news paper agency can sell with a tag “more number of pages for only 2Rs.” And other is it adds to a weight when the reader sell that to a waste paper collector.
One day my sister told me to read one of the article from speaking tree and it changed my opinion about these centre pages and I started reading all the newspaper articles, especially Speaking tree which I never missed afterwards.
One special thing about this speaking tree is everyday it highlights on new thing. You don’t need to remember yesterday where it was stopped. At the same time it does not belong to any religion. The excerpts are from the different religions all over the world. After reading, you will never get disappointed. It always contains a beautiful message. It is upadesha, advice based on a logical, scientific exposition on the human personality. Reflect on these principles, experiment with them and draw your own conclusions just as you would with physics or chemistry.
You might be thinking why I am telling all these things here? Right, the thing is Times of India after successful completion of rolling out of speaking tree books, now adding one more supplement to its Sunday edition from March.
As D.V.G says ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು.... when you adopt these hidden messages in your life, the journey becomes smooth and will be full of happiness.
Thanks to Times of India.
Earlier I used to switch over to a new page without even bothering to see what it is, including the articles which are published in Vijaya Karnataka or some other news papers. I used to think that these central pages are dedicated to those people who are staying alone or his/her wife/husband is deaf. No body is there to hear him. So he is sending that bloody stuff’s to local newspaper editors. Two profits of that stuff are news paper agency can sell with a tag “more number of pages for only 2Rs.” And other is it adds to a weight when the reader sell that to a waste paper collector.
One day my sister told me to read one of the article from speaking tree and it changed my opinion about these centre pages and I started reading all the newspaper articles, especially Speaking tree which I never missed afterwards.
One special thing about this speaking tree is everyday it highlights on new thing. You don’t need to remember yesterday where it was stopped. At the same time it does not belong to any religion. The excerpts are from the different religions all over the world. After reading, you will never get disappointed. It always contains a beautiful message. It is upadesha, advice based on a logical, scientific exposition on the human personality. Reflect on these principles, experiment with them and draw your own conclusions just as you would with physics or chemistry.
You might be thinking why I am telling all these things here? Right, the thing is Times of India after successful completion of rolling out of speaking tree books, now adding one more supplement to its Sunday edition from March.
As D.V.G says ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು.... when you adopt these hidden messages in your life, the journey becomes smooth and will be full of happiness.
Thanks to Times of India.
ಬುಧವಾರ, ಫೆಬ್ರವರಿ 24, 2010
ದಾಸವಾಣಿ
(ಪುರಂದಾಸರ ಕೈಲಾಸವಾಸ ಗೌರೀಶ ಈಶ ಕವನದಿಂದ ಸ್ಪೂರ್ತಿ ಪಡೆದದ್ದು)
ಕೈಲಾಸವಾಸ ಸಾಕಾಯ್ತು ಇ ದೇಶ
ತೈಲ ದಾರೆಯಂತೆ ಸುರಿಯುತಿದೆ ಹಿಮವಿಲ್ಲಿ !!ಪ!!
ಹಣವು ಕಾರಣವಲ್ಲ ಇ ಪ್ರವಾಸಕ್ಕೆಲ್ಲ
ಅನಲಾಕ್ಷ ನಿನ್ನ ಕ್ರುಪೆ ಇಲ್ಲದೇ
ಮನಕೆ ಕ್ಷಣ ಸುಖ ನೀಡಿ
ನೆಲೆಗೊಳಿಸು ಈ ದೇಹವ
ತಾಯಿನಾಡ ನೆಲದಲೀ !!೧!!
ಕೈಲಾಸವಾಸ ಸಾಕಾಯ್ತು ಇ ದೇಶ
ತೈಲ ದಾರೆಯಂತೆ ಸುರಿಯುತಿದೆ ಹಿಮವಿಲ್ಲಿ !!ಪ!!
ಹಣವು ಕಾರಣವಲ್ಲ ಇ ಪ್ರವಾಸಕ್ಕೆಲ್ಲ
ಅನಲಾಕ್ಷ ನಿನ್ನ ಕ್ರುಪೆ ಇಲ್ಲದೇ
ಮನಕೆ ಕ್ಷಣ ಸುಖ ನೀಡಿ
ನೆಲೆಗೊಳಿಸು ಈ ದೇಹವ
ತಾಯಿನಾಡ ನೆಲದಲೀ !!೧!!
ಹರಿಭಕ್ತಿ ಸಾರ
ದೀನ ನಾನು ಸಮಸ್ತ
ಲೋಕಕೆ ದಾನಿ ನೀನು
ವಿಚಾರಿಸಲು ಮತಿ ಹೀನ ನಾನು ಕೈವಲ್ಯ ಪತಿ ನೀನು!
ಏನ ಬಲ್ಲೆನು ನಾನು
ನಡೆಸು ಜ್ನಾನ ಮೂರುತಿ ನೀನು
ನಿನ್ನ ಸಮಾನರುಂಟೆ ದೇವ ರಕ್ಷಿಸು ನಮ್ಮನನವರತ!!೧!!
ಗಿಳಿಯ ಮರಿಯನು ತಂದು
ಪಂಜರದೊಳಗೆ ಪೋಶಿಸಿ, ಕಲಿಸಿ
ಮ್ರುದು ನುಡಿಗಳನು ಲಾಲಿಸಿ ಕೇಳ್ವ ಪರಿಣಿತರಂತೆ ನೀನೆಮಗೆ!
ತಿಳಿಹು ಮತಿಯನು ಎನ್ನ
ಜಿಹ್ವೆಗೆ ಮೊಳಗುವಂದದಿ ನಿನ್ನ
ನಾಮಾವಳಿಯ ಪೊಗಳಿಕೆಯನಿತ್ತು ರಕ್ಷಿಸು ನಮ್ಮನನವರತ!!೨!!
ಲೋಕಕೆ ದಾನಿ ನೀನು
ವಿಚಾರಿಸಲು ಮತಿ ಹೀನ ನಾನು ಕೈವಲ್ಯ ಪತಿ ನೀನು!
ಏನ ಬಲ್ಲೆನು ನಾನು
ನಡೆಸು ಜ್ನಾನ ಮೂರುತಿ ನೀನು
ನಿನ್ನ ಸಮಾನರುಂಟೆ ದೇವ ರಕ್ಷಿಸು ನಮ್ಮನನವರತ!!೧!!
ಗಿಳಿಯ ಮರಿಯನು ತಂದು
ಪಂಜರದೊಳಗೆ ಪೋಶಿಸಿ, ಕಲಿಸಿ
ಮ್ರುದು ನುಡಿಗಳನು ಲಾಲಿಸಿ ಕೇಳ್ವ ಪರಿಣಿತರಂತೆ ನೀನೆಮಗೆ!
ತಿಳಿಹು ಮತಿಯನು ಎನ್ನ
ಜಿಹ್ವೆಗೆ ಮೊಳಗುವಂದದಿ ನಿನ್ನ
ನಾಮಾವಳಿಯ ಪೊಗಳಿಕೆಯನಿತ್ತು ರಕ್ಷಿಸು ನಮ್ಮನನವರತ!!೨!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)