ಬುಧವಾರ, ಆಗಸ್ಟ್ 25, 2010

ತರಳೆಯರ ಹಿಂದಿನ ತರಲೆಗಳು.

"ಈ ಗುಲಾಬಿಯು ನಿನಗಾಗಿ ಇದು ಸೂಸುವ ಪರಿಮಳ ನಿನಗಾಗಿ..." ಪುರಂದರ ದಾಸರ ೩೩೫ನೇ ಮೇಳಕರ್ತಾ ರಾಗದಲ್ಲಿ ಹಾಡಲು ಶುರು ಮಾಡಿದ ಪ್ರವಾದಿಯ ಬಾಯಿ ಮುಚ್ಚಿಸಬೇಕೋ ಅಥವಾ ಈಗ ಗುಲಾಬಿ ಮೇಡಮ್ English class ಎಂದು ನೆನಪಿಸಿದ್ದಕ್ಕೆ thanks ಹೇಳಬೇಕೋ ಎಂದು ಯೋಚಿಸುತ್ತಿರುವಷ್ಟರಲ್ಲಿ ಮೇಡಂ classಗೆ entry ಕೊಟ್ಟಾಗಿತ್ತು. ನಗುವನ್ನು ಮರೆಮಾಚಿ ಎದ್ದುನಿಂತು "ನಗುವಾ .... " ಎಂದು ಹಾಡಿ(ಸ್ವಗತ) ಕುಳಿತೆವು. ನಿಮ್ಮ ತಲೇಲಿ ಪುರಂದರ ದಾಸರ ಮೇಳಕರ್ತಾ ರಾಗ, ಅದೂ ೩೩೫ನೇದು ಯಾವುದು? ಅಂತ ಕೊರಿತಿದೆ ಅನ್ಸುತ್ತೆ. ಅದಕ್ಕೋಸ್ಕರ ನೀವು Google ಗೆ ಹೋಗಿ ಹುಡುಕೋದು? ಅದು ಸಿಗದೆ ತಲೆ, ಮೈ ಪರಚಿಕೊಳ್ಳೋದು ಎಲ್ಲ ಬೇಡ. So ಮೊದ್ಲೇ ಹೇಳಿ ಬಿಡ್ತೀನಿ. ಈ ತಿರುಕರ ಬಿಕ್ಷೆ ಬೇಡೋ ರೀತಿ ನಿಮಗೆಲ್ಲಾ ಗೊತ್ತಿದೆ ತಾನೆ? ಅವರು ಕೂಗ್ತಾರಲ್ವ ಅದನ್ನ ನಾವು ಸ್ವಲ್ಪ ಸ್ಟೈಲಾಗಿ ಹೀಗೆ ಕರೀತಿವಿ. ಬೇಜಾರಿಲ್ಲ ತಾನೆ?
ನಾನು ಹೇಳೋಕೆ ಹೊರಟಿರೋದು ನನ್ನ PU college ದಿನಗಳ ಬಗ್ಗೆ. ಮೊದಲನೇ ಬಾರಿ Pant ಹಾಕ್ಕೊಂಡು (ಅಲ್ಲಿ ತನಕ ಏನು ಹಕ್ತಿರ್ಲಿಲ್ಲ ಅಂತಲ್ಲಾ ಸ್ವಾಮಿ ಮೊದಲು ಚಡ್ಡಿ ಹಾಕ್ತಿದ್ದೆ ಅಂತ ಅದರರ್ಥ. ಜನ ಬುದ್ದಿವಂತರಾಗೋಕ್ ಹೋಗಿ ಅಪಾರ ಅರ್ಥ ಮಾಡ್ಕೊಳೋರ್ ಸಂಖ್ಯೆ ಜಾಸ್ತಿ ಆಗಿದೆ. ಕಲಿಯುಗ!!!???) college ಮೆಟ್ಟಿಲು ಹತ್ತಿ classಗೆ entry ಕೊಟ್ರೆ ಎಲ್ಲ ಹೊಸ ಮುಖಗಳೇ ಕಾಣಿಸಿದ್ವು. ಅದೇ ಸಮಯಕ್ಕೆ ನನ್ನ ಹೆಸರು ಹಿಡಿದು ಯಾರೋ ಕೂಗಿದ ಹಾಗಾಯ್ತು. ಹುಡುಗರ ಸಾಲಿನಲ್ಲಿ ಹುಡುಕ ತೊಡಗಿದೆ. ಮತ್ತೊಮ್ಮೆ ಕರೆದರು. ಆದರೆ ದ್ವನಿ ಬರ್ತಿರೋದು ಹುಡುಗಿಯರ ಸಾಲಿನಿಂದ. ನಂಗೆ ಯಾವ ಹುಡುಗಿಯರು ಪರಿಚಯ ಇಲ್ವಲಾ? ಹುಡುಗಿಯರೇ ragging ಮಾಡೋಕ್ ಕರೀತಿದಾರಾ? ಆ ಕಡೆ ತಿರ್ಗೋದೋ ಬೇಡ್ವೋ? ಅಂತ ಮನದಲ್ಲೇ ಯೋಚಿಸಿ " ಕತ್ತಿ ಹೆಗಲಲ್ಲಿಟ್ಟು ತಾನೆಯು! ಮತ್ತೆ ಬರುವಳು ಹಿಂದೆ ಮುಂದೆಯು! ..... ಮತ್ತೆ ಚಿಂತೆತ್ತಣದು ಭಯ ದೇವಿ ಕಾದಿರೆ! ಸತ್ಯ ನುಡಿಯಿದು ಭಯವದಿಲ್ಬ್ರಹ್ಮಾದಿಗಳದೆಂದ!" (ಜಗನ್ಮಾತೆಯ ನೆನೆವವರಿಗೆ ಯಾರಿಂದಲೂ ಭಯವಿಲ್ಲ) ದೇವೀಮಹಾತ್ಮೆಯ ಒಂದು ಷಟ್ಪದಿಯ ಮೂಲಖ ತಾಯಿಯನ್ನು ಈ ಭೂಲೋಕದ ನಾ(ಮಾ)ರಿಯರಿಂದ ರಕ್ಷಿಸೆಂದು ಬೇಡತೊಡಗಿದೆ. ಅಷ್ಟರಲ್ಲಿ ಆಚಾರಿ ಅದೆಲ್ಲಿಂದನೋ ಬಂದು ತನ್ನ ಸ್ಥಳಕ್ಕೆ ಕರೆದುಕೊಂಡು ಹೋದ.
ನಮ್ಮ ಬೆಂಚ್ ನಲ್ಲಿ govt ಹೈಸ್ಕೂಲ್ ಸಹಪಾಠಿಗಳೇ ಇದ್ರು ಪ್ರವಾದಿ, ಆಚಾರಿ, ಮಾರೀಚ, ಇನ್ನೊಬ್ಬ ಪ್ರವಾದಿಯ ಸಂಬಧಿಕ. ಅವನ ಪರಿಚಯನು ಆಯಿತು. ಅಷ್ಟರಲ್ಲೆ lecturer ಬಂದ್ರು. ಪಾಠ ಮಾಡೋದು ಬಿಟ್ಟು ಎಲ್ಲರ ಹೆಸರು ಕೇಳೋಕ್ ಶುರು ಮಾಡಿದ್ರು. ನಮ್ಮ ಮುಂದಿನ ಬೆಂಚ್ ತನಕನೂ ಬಂದಾಯ್ತು. ಈಗ ಮೈಯೆಲ್ಲ ಕಿವಿಯಾಗಿಸಿ ಕೇಳೋಕ್ ಶುರುಮಾಡಿದ್ವಿ.
ಶ್ರುತಿ G M . SJ………….S Sringeri. ಎಲ್ಲರು ಒಬ್ರಿಗೊಬ್ರು ಮುಖ ನೋಡ್ಕೊಂಡ್ವಿ.
ಮತ್ತೆ ಶ್ರುತಿ H L SJ A………….S Sringeri. ಎರಡನೇದು.
ನಾನು ಸುಮ್ನಿರಲಾರ್ದೆ ಕೇಳೇಬಿಟ್ಟೆ.ಲೇ ಪ್ರವಾದಿ Sringeri ಜೊತೆ ABCD, ಅದೂ ಉಲ್ಟಾ ಪಲ್ಟಾ ಯಾಕೋ ಹೇಳ್ತಿದಾರೆ? ಮುಂದಿನ ಬೆಂಚ್ ನ ಅಷ್ಟೂ ಜನ ತಿರುಗಿ ದರ್ಶನ ಕೊಟ್ರು. ಹೀಗೆ ಒಟ್ಟಿಗೆ ನೋಡಿದ್ರೆ ಯಾರನ್ನ ನೋಡೋದು ಯಾರನ್ನ ಬಿಡೋದು ಅನೋದೇ ಅರ್ಥ ಆಗ್ಲಿಲ್ಲ. ಸುಮ್ನೆ ಹೇಳಿದೆ, Actually ಎಲ್ಲರು ಗುರಾಯಿಸಿದ್ರು. ನನ್ನ ಉಸಿರು ಕೂಡ ಬಂದ್ ಆಯಿತು.
ಮತ್ತೆ ಇಬ್ರು ಅದನ್ನೇ repeat ಮಾಡಿ ಕೂತ್ರು. ಈಗ ಸ್ವಲ್ಪ ನಿಧಾನಕ್ಕೆ ವಿಪ್ರನಿಗೆ ಹೇಳಿದೆ. ಯಾವುದೋ ಒಂದು alphabet ಮಿಸ್ ಆಗ್ತಿದೆ ಅಲ್ವಾ ಅಂತ. ನನ್ನ ಕರ್ಮ ಅದೂ ಕೇಳಿಸ್ ಬೇಕೇ? ಈ ಬಾರಿ ನಾನು ಅವರ ಕರುಳೊಳಗೇ ಹೋದ್ನೇನೋ ಅನ್ನಿಸಿಬಿಡ್ತು. ತಿನ್ನೋ ಹಾಗೆ ನೋಡಿದ್ರು. ( ರೌದ್ರಂ ರೌದ್ರಾಂತಕಂ ಘೋರಂ) ಆಮೇಲೆ ಅವತ್ತಿಡಿ ಮಾತೇ ಹೊರಡ್ಲಿಲ್ಲ.
ಇಷ್ಟರಲ್ಲಾಗಲೇ ನಿಮಗೆ ನಾನು ಮೊದಲು ಹೇಳಿದ ಘಟನೆ(ಹುಡುಗಿಯರ ಸಾಲಿನಿಂದ ಬಂದ ದ್ವನಿ) ನಡೆದಿರಬಹುದಾದ ರೀತಿ ಅರ್ಥ ಆಗಿರಬಹುದು. ಹ್ನೂಂ ನಾನು ಹೋಗಿ ಕೂತಿದ್ದು ಲಲನಾಮಣಿಯರ ಹಿಂದೆ. ಅವರೆಲ್ಲಾ ನಮ್ಮ ಊರಿನ ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಬಾಲಿಕಾ ಪ್ರೌಡಶಾಲೆಯಿಂದ ಬದವರು. ಆ ಶಾಲೆಯ ಹೆಸರಿನ shortform
ಉಂಟಲ್ವಾ ಅದನ್ನೇನಾದ್ರು ನೀವು ಒಂದೇ ಸರಿ ಕೇಳಿ ನೆನಪಿಟ್ಟುಕೊಂಡ್ರೆ ನಿಮಗೆ ನೊಬೆಲ್ guarantee.
ನಿಮಗೆ ಗೊತ್ತೇ ಇದೆ ಹುಡುಗಿಯರು ಹತ್ರ ಇದ್ರೆ ಹುಡುಗ್ರ ಕತೆ ಮಂಗಕ್ಕೆ ಹೆಂಡ ಕುಡಿಸಿ ಬಿಟ್ಟ ಹಾಗೆ ಅಂತ. ಅದು ನಮಗೂ ಆಗಿತ್ತು. ಎಲ್ಲಾ period ನಲ್ಲೂ ಏನಾದ್ರು ಒಂದು ತಮಾಶೆ ಮಾಡ್ತಾ ಅದ್ರಲ್ಲೂ temporary lecturers (ಗುಲಾಬಿ ಮೇಡಂತರದವ್ರನ್ನ)ನ ಗೋಳು ಹೊಯ್ಕೊಳ್ತಿದ್ವಿ. ಹೀಗೇ ಒಂದ್ಸಲ ಪ್ರವಾದಿ ಏನೋ ತಮಾಶೆ ಮಾಡೋಕ್ ಹೋಗಿ ಹುಡುಗಿಯರು ಗಟ್ಟಿಯಾಗಿ ನಗಾಡಿ ಸಿಕ್ಕಿಬಿದ್ದು ಎಲ್ಲ ಆಗಿತ್ತು.
ಅವರೆಲ್ಲಾ ಆಮೇಲೆ ಒಳ್ಳೆ friends ಕೂಡ ಆದ್ರು. ನಮ್ಮಹತ್ರ doubts ಕೂಡ ಕೇಳ್ತಾ ಇದ್ರು. ಒಂದೂವರೆ ವರ್ಷ ತುಂಬಾನೇ ಎಂಜಾಯ್ ಮಾಡಿದ್ವಿ. ಇನ್ನೂ ತುಂಬಾ ವಿಷಯಗಳಿದಾವೆ ಇದರ ಬಗ್ಗೆ, ಅದನ್ನೆಲ್ಲಾ ಬರೀತಾ ಹೋದರೆ ರಾಮಾಯಣ, ಮಹಾಭಾರತ ಅಧ್ಯಾಯಗಳ ಸಂಖ್ಯೆಯನ್ನೂ ಮೀರಿಸಬಹುದು. ಅದನ್ನೆಲ್ಲಾ ಇನ್ನೊಮ್ಮೆ ಯಾವಾಗ್ಲಾದ್ರು ಹೇಳ್ತೀನಿ.
"ಸ್ನೇಹ ಅತಿ ಮಧುರ.. ಸ್ನೇಹ ಅದು ಅಮರ" ಏನಂತೀರಿ?

ಶುಕ್ರವಾರ, ಆಗಸ್ಟ್ 13, 2010

ಮುಸ್ಸಂಜೆ ಮಾತು

"ಯಾವ ಕಡೆಗೋ"
ಅಪ್ಪನ ದನಿ ಸಂಜೆ ಆಗುತ್ತಿದ್ದ ಹಾಗೆ ಅಂಗಿ ಹಾಕ್ಕೊಂಡು ಹೊರಟ ನನ್ನ ಕಿವಿ ತಾಕಿತು.
"ಮೇಲೆ" ಎಂದು ಉತ್ತರಿಸಿ ಚಪ್ಪಲಿ ಏರಿಸಿ ಹೊರಟೆ. ಮೇಲೆ ಅಂದ್ರೆ ಮೇಲಕ್ಕಲ್ಲ ಸ್ವಾಮಿ ನಮ್ಮ ಮನೆ, ಮಲೆನಾಡಿನ ಒಂದು ಸಣ್ಣ ಹಳ್ಳಿ. ಹಳ್ಳಿ ಅಂದ್ರು ತಪ್ಪಾಗುತ್ತೆ. ದಟ್ಟಡವಿಯ ನಡುವೆ ಕಟ್ಟಿರುವ ಪುಟ್ಟ ಒಂಟಿ ಮನೆ. ಪೇಟೆಗೆ ಹೋಗೋ ಟಾರ್ ರೋಡ್ ಗಿಂತ ಸ್ವಲ್ಪ ಕೆಳಗೆ ಇದೆ. ಹಾಗಾಗಿ ಈ ಪದ ಬಳಕೆಗೆ ಬಂದಿದೆ ಅಷ್ಟೆ.
ಇದು ಪ್ರತಿ ದಿನದ ಹಾಡು. ಸೂರ್ಯ ಮುಳುಗೋ ಸಮಯ ಹೆಚ್ಚು ಕಮ್ಮಿ ಆದ್ರೂ ಆಗ್ಬಹುದು, ಆದರೆ ನಾನು ಸಂಜೆ ಮನೆ ಬಿಡೊ ಸಮಯ ಹೆಚ್ಚು ಕಮ್ಮಿ ಆಗ್ತಿರ್ಲಿಲ್ಲ. ಹಾಗೇ ಅಪ್ಪಂಗೂ ಇದು ಅಭ್ಯಾಸ ಆಗಿಹೋಗಿತ್ತು. ಮಗ ದಾರಿ ತಪ್ಪಿದ್ದು ಅವರಿಗೂ ಗೊತ್ತಿತ್ತು ಅಂತೀರಾ? ಹ್ನೂಂ ಅದು ಸರೀನೇ...
ಬೇಸಿಗೆಯಲ್ಲಿ ಹಗಲೆಲ್ಲ ಕೆಲಸಗಾರರ ಬೆವರನ್ನೇ ಇಳಿಸಿದ್ರೂ ರಕ್ತವನ್ನೇ ಹೀರಿದಂತೆ ಕಾಣುವ ಮರೆಯಾಗಲು ಹೊರಟ ಸೂರ್ಯ, ಜೀರುಂಡೆಗಳ ಕೂಗಾಟವನ್ನೇ ಮೀರಿಸ ಹೊರಟ, ಧೋ ಎಂದು ಸುರಿಯುತ್ತಿರುವ ಮಲೆನಾಡಿನ ಮಳೆಗಾಲದ ಮಳೆ, ಚಂದ್ರ ಬರುವನೆಂಬ ಹೆದರಿಕೆಗೋ ಎಂಬಂತೆ ಕಾನನದ ಮಧ್ಯೆ ಮರೆಯಾಗಲು ಹೊರಟ ನವಿಲುಗಳು, ಇವೆಲ್ಲದರ ಸೌಂದರ್ಯವನ್ನು ಸವಿಯುತ್ತ ನನ್ನ ಸಂಜೆಯ ಪಯಣ.
ಸ್ನೇಹಿತನ ಮನೆಗೆ ಕೇವಲ ಹತ್ತು ನಿಮಿಷಗಳ ದಾರಿ. ಆದರೆ ಈ ಸಂಜೆಯ ಸೊಬಗು ಯಾವತ್ತೂ ನನ್ನನ್ನು ಹತ್ತು ನಿಮಿಷದಲ್ಲಿ ಕ್ರಮಿಸಲು ಬಿಟ್ಟಿಲ್ಲ. ನಾವಡ,ಧಾರೇಶ್ವರರ ಧಾಟಿಯಲ್ಲಿ ಭಾಗವತಿಗೆ, ಭಾವಗೀತೆಗಳು, ಹಿಂದಿ ಸಿನಿಮಾ ಹಾಡುಗಳು ಬಾಯಿಗೆ ಬಂದ ಹಾಗೆ ಒಂದರ ಮೇಲೊಂದರಂತೆ ಹಾಡುತ್ತಾ ಅಲ್ಲ ಕಿರುಚುತ್ತಾ ನಡೆಯೋದು ನನ್ನ ಅಭ್ಯಾಸ. ಈಗಲೂ ನಾನು ಮನೆಗೆ ಹೋದ್ರೆ ಊರವ್ರಿಗೆಲ್ಲ ಗೊತಾಗೋದು ಈ ಕಿರುಚಾಟದಿಂದಾನೇ. ಮನೆ ತಲುಪಿದ ಅರ್ಧಘಂಟೆಯೊಳಗೆ ಎಲ್ಲ ಬಂದು "ನಮ್ಮ ಊರಿಗೆ ಯಾರೇ ಬಂದ್ರು ನಮಗೆ ಗೊತಾಗುತ್ತೆ. ನೀನು ಕದ್ದು ಕೂತ್ರೆ ಗೊತಾಗೋಲ್ಲ ನಮಗೆ ಅಂದ್ಕೊಂಡಿದಿಯಾ? ಹೊರಗೆ ಬಾರಾ?" ಅಂತ ಒಬ್ರು ಕರದ್ರೆ ಇನ್ನೊಬ್ರು "ಯಾಕಾ ಬಂದೀ, ಅಲ್ಲಿಂದ ಬೆರೆಸಿದ್ರೇನೋ " ಅಂತಾನೋ ಇಲ್ಲಾ "ದುಡುದ್ ತಿನ್ನ್ರೋ ಅಂತಂದ್ರೆ ಈ ಹುಡುಗ್ರು ಮೂರು ಮೂರು ದಿನಕ್ಕೆ ಓಡಿ ಬರ್ತಾವಪ್ಪಾ" ಅಂತ ಹೇಳೋಕ್ ಶುರು ಮಾಡ್ತಾರೆ. ನಾನು ಉತ್ತರ ಹೇಳೋಕೆ ಮುಂಚೇನೆ ಅಪ್ಪ ಅವ್ರಿಗೆಲ್ಲ ಅವರ ಮಾತಿನ ಧಾಟಿಯಲ್ಲೇ ಉತ್ತರ ಕೊಟ್ಟು ಸುಮ್ನಾಗಿಸ್ತಾರೆ. ನನ್ನ ಕೈಲಿ ಆಗದ ಮಾತು ಬಿಡಿ....
ನನ್ನ ಬಾಲ್ಯದ ದಿನಚರಿಗೆ ಮತ್ತೆ ವಾಪಾಸಾಗ್ತೀನಿ. ದಿನಾ ಅವನ ಮನೆಗೆ ಹೋಗೋದೂ, ಒಂದು ಕಾಫೀ ಜೊತೆಗೆ ಏನಾದ್ರು ತಿನ್ನೋಕೆ. ಅಲ್ಲಿಂದ "ಇಷ್ಟು ದಿನ ಈ ವೈಕುಂಠ ಎಷ್ಟು ದೂರವೋ ಎನ್ನುತಲಿದ್ದೆ" ಅಂತ ಹಾಡುತ್ತಾ ವೈಕುಂಠಪುರದ ಕಡೆಗೆ ಒಂದು ಸಣ್ಣ ವಾಕಿಂಗ್. ಅಲ್ಲಿಂದ ಮತ್ತೆ ನಮ್ಮ ಮನೆಯ ದಟ್ಟಡವಿಯ ಹಾದಿಗೆ ವಾಪಾಸಾಗಿ ನಮ್ಮ ಕಟ್ಟೆ ಪುರಾಣ ಶುರು ಮಾಡ್ತಿದ್ವಿ. ವೇದ, ಉಪನಿಷತ್ ಗಳಿಂದ ಹಿಡಿದು ಪೇಟೆಯ ಪಡ್ಡೆ ಹುಡುಗರ ದುರ್ಗುಣಗಳು ಎಲ್ಲ ನಮ್ಮ ಚರ್ಚೆಯಲ್ಲಿ ಬರ್ತಿದ್ವು. ಕೆಲವೊಮ್ಮೆ ರಾತ್ರಿ ಹನ್ನೊಂದು ಘಂಟೆ ಆದ್ರು ನಮ್ಮ ಮಾತು ಮುಗೀತಿರ್ಲಿಲ್ಲ. ಮನೆಗೆ ಹೊರಡುವಾಗ ಇಬ್ರು ಹೇಳ್ಕೊಳೋದಿತ್ತು. "ಏನು ಮಾತಾಡಿದ್ವೋ ಇಷ್ಟೊತ್ತು " ಅಂತ, ಆದ್ರೆ ಇಬ್ರಿಗು ನೆನಪಿರ್ತಿರ್ಲಿಲ್ಲ.
ಈಗ ಇದು ಬರಿ ನೆನಪು ಮಾತ್ರ. ತಿಂಗಳಲ್ಲಿ ಒಮ್ಮೆ ಮಾತಾಡೋದು ಕಷ್ಟ. . ಜೀವನದ ನದಿಯಲ್ಲಿ ಇಬ್ರು ಕೊಚ್ಚಿ ಹೋಗಿಬಿಟ್ಟಿದಿವಿ. ಪ್ರವಾಹ ನಮ್ಮನ್ನ ಮನೆಯಿಂದ ಬಹುದೂರ ಎಳೆತಂದಿದೆ. ಇದು ಹೊಟ್ಟೆಪಾಡಲ್ಲ ಸ್ವಾಮಿ, ದುರಾಸೆ. ಒಂದಂತು ತಪ್ಪು ಮಾಡಿ ಕಳಕೊಂಡ್ವಿ ಆದ್ರೆ ಈ ಸ್ನೇಹವಾದರೂ ಕೊನೆತನಕ ಉಳಿಯಲಿ ಅನ್ನೋ ಆಸೆ.

ಬುಧವಾರ, ಜೂನ್ 9, 2010

ಸಾವಿರದ ಶರಣು

ಏಕನೆಂಬರು, ಅನೇಕನೆಂಬರು,
ಎಲ್ಲೆಲ್ಲು ಇಹನೆಂಬರು,
ಅವನನು ತೋರ್ವ ಗುರುವು ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,

ಕಷ್ಟದೊಳ್ ಸಾವಿರ ಉಪಾಯ ಪೇಳುತ,
ನೂಲನಡಿಗೆ ಸಂಸಾರ ಇದೆಂಬರು,
ಹೆಜ್ಜೆಗೆ ಹೆಜ್ಜೆ ಸೇರಿಸೊ ಬಂಧು ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,

ಎನ್ನಯ ಮೂಳೆ ಚಾಣವಾಗಿಸಿ
ಬಂಡೆಯ ಕೆತ್ತಿ ವಿಗ್ರಹ ಮಾಳ್ಪೆ
ಪ್ರಾಣವನೀವ ದೈವ ಸಿಕ್ಕೆಡೆ
ಸಾವಿರ ಪ್ರಣಾಮ ಶಿವಗೆ,

ನಂದಾದೀಪ ಆರುವವರೆಗೆ
ನೀಡುವೆ ಆನಂದ ನಿಮಗೆ
ಎನ್ನಯ ಚಿತೆಯೂ ಸಂತಸವಿತ್ತೆಡೆ
ಸಾವಿರ ಪ್ರಣಾಮ ಶಿವಗೆ,

ಮಂಗಳವಾರ, ಮೇ 4, 2010

ಪ್ರಾಣಾಪಾನ ಸಂಕಟ

ಹೃದಿ ಪ್ರಾಣೋ ಗುದೇSಪಾನ: ಸಮಾನೋ ನಾಭಿಸಂಸ್ಥಿತ:!
ಉದಾನ: ಕಂಠದೇಶಸ್ಥೋ ವ್ಯಾನ: ಸರ್ವಶರೀರಣ:!!

Actually I didn’t know the meaning of the verse which we chant before taking food, until I come across aforementioned shloka in the book TARKA SANGRAHA by Annambhatta. Thought of sharing with you all.
          The air that is inhaled and exhaled through the nostrils and the mouth (sometime) is Prana  and is located in the heart. The air that presses down water, waste matter, foetus etc is Apana and is located in the anus. Samana helps in the digestion of the food etc by stimulating gastric fire in the stomach and is located in the region of navel. Udana takes the digested food etc upward from navel and which located in throat and enters into the head. Vyana is the vital air that courses through the entire nevous system and is diffused through the whole body.

ಸೋಮವಾರ, ಮಾರ್ಚ್ 22, 2010

ಪದಬಂಧ

(ಮಾದ್ವ ಹಾಸ್ಟೆಲ್ ನ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪದಬಂಧ ಸ್ಪರ್ಧೆಗಾಗಿ ತಯಾರಿಸಿದ್ದು -೨೦೦೬)



ಎಡದಿಂದ ಬಲಕ್ಕೆ
1. ನೂಲು ಹಿಡಿದು ನ್ಯಾಯಾಲಯಕ್ಕೆ ಬಂದ ಫಿರ್ಯಾದಿ. (4)
3. ರಾಮಪುತ್ರ ಬಂದು ಕ್ಷೇಮಸಮಾಚಾರ ವಿಚಾರಿಸಿದನೆ? (3)
6. ರಣವಲ್ಲದ್ದು, ಕಾಡಗಿದೆ. (3)
7. ಶಾಖದೊಂದಿಗೆ ಮರ್ಯಾದೆ ಸೇರಿ ಉಷ್ಣತೆಯಾಗಿದೆ. (4)
9. ಮನುಷ್ಯನಲ್ಲಿ ಹುಟ್ಟಿದುದು ಸಮಸ್ತರಿಗೂ ತಿಳಿದಿದೆ. (5)
11. ಲವ ತಂದ ಉಪ್ಪು. (3)
13. ಹರನು ಮಧ್ಯೆ ಕುಳಿತು ಸಮಯ ವ್ಯರ್ಥ ಮಾದಿದನೇ? (5)
16. "ಯಾವಾಗಲೂ" ಎನ್ನುವುದನ್ನು ಹೀಗೂ ಹೇಳಬಹುದೇ? (5)
19. ಅರಸ ಬರುತ್ತಿದ್ದಾನೆ ಅವನನ್ನು ಹೊಗಳಿ (ಪರಾಕು) (7)
21. ಬಾಣದೊಂದಿಗೆ ಬಂದ ರಷ್ಯಾದ ಟೆನ್ನಿಸ್ ಆಟಗಾರ್ತಿ. (4)
ಮೇಲಿನಿಂದ ಕೆಳಕ್ಕೆ.
1. ಕೈಗಳ ಮಧ್ಯೆ ಅವತರಿಸಿದ ಚಿನ್ನ. (4)
2. ಶೀರ್ಷಾಸನ ಹಾಕಿದ "ವೈಶ್ರವಣ" ಉತ್ತರ ದಿಕ್ಕಿನ ಅಧಿಪತಿ.(3)
4. ಬಳ್ಳಿಯೊಂದಿಗೆ ಸಿಕ್ಕ ಹಣ್ಣು. (4)
5. ಅಂಜನ ಹಾಕಿಕೊಂಡು ಏರಿದ ಕಟಕಟೆ (4)
6. ಎಣ್ಣೆ ಹಚ್ಚಿ ಮಾಡಿದ ಸ್ನಾನ (4)
8. ಯುದ್ದಭೂಮಿಯಲ್ಲಿ ಮಾಡಿದ ಹೋಮ (3)
10. ಶೀರ್ಷಾಸನ ಹಾಕಿದ ಕಾರ್ಮೋಡದ ಸಾಲುಗಳು (4)
12. ದಾನಶೂರ ಕರ್ಣನ ಈ ಹೆಸರು ಪೃಥ್ವಿಯನ್ನು ಸೀಳಿ ಬಂದಿದೆ. (4)
14. ಇಂದ್ರನಿಂದ ಕೆಳದವಡೆಗೆ ಪೆಟ್ಟುತಿಂದರೂ ಅನುಮಾನವಿಲ್ಲ, ಈತ ಪರಾಕ್ರಮಿ. (4)
15. "ಬಚ್ಚ" ನಲ್ಲದಿದ್ದರೂ ಖ್ಯಾತ. ಈತ ತಲೆಕೆಳಗಾದ ಹಿಂದಿ ನಟ. (4)
17. ನರಿಯಲ್ಲಿರುವ ವಿಷ್ಣು. (4)
18. ವೃಕ್ಷದ ನಡುವೆ ಬಂದ ಬದಲಾವಣೆಯ ಕಾಲ ತಲೆಕೆಳಗಾಗಿದೆ. (4)
20. ರಂಗನಾಯಕನ ಪತ್ನಿಯಾದ ಲಕ್ಶ್ಮಿಯು ಆತನನ್ನು "ಕಮಲದ ಕಣ್ಣು"ಳ್ಳವನೇ ಎಂದು ಸಂಭೋದಿಸಿ ಎಬ್ಬಿಸುತ್ತಿದ್ದಾಳೆ.(ತಲೆಕೆಳಗಾಗಿದೆ) (6)

ಬುಧವಾರ, ಮಾರ್ಚ್ 17, 2010

ಪಂಚಾಂಗ.

ತಿಥ್ಯೇಶ್ಚ ಶ್ರೀಯಮಾಪ್ನೋತಿ ವಾರಾತ್ ಆಯುಷ್ಯವರ್ಧನಮ್ !
ನಕ್ಷತ್ರಾತ್ ಹರತೇ ಪಾಪಮ್ ಯೋಗಾತ್ ರೋಗನಿವಾರಣಮ್ !
ಕರಣಾತ್ ಕಾರ್ಯಸಿದ್ದಿಶ್ಚಾತ್ ಪಂಚಾಂಗಂ ದಶಮೇ ಫಲಮ್ !!

ವಿಕೃತಿ ಸಂವತ್ಸರದ ಪಂಚಾಂಗವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
www.sringeri.net/wp-content/uploads/2010/02/2010_kannada.pdf

ಮಂಗಳವಾರ, ಮಾರ್ಚ್ 16, 2010

ನಂಬಬೇಡಿರೋ...

ನಂಬಬೇಡಿ ನಾರಿಯರನು ಹಂಬಲ ಹಾರೈಸಬೇಡಿ ಪ
ಅಂಬುಜಾಕ್ಷಿಯರೊಲುಮೆ ಡಂಭಕವೆಂದು ತಿಳಿಯಿರೊ ಅ

ಮಾಟವೆಲ್ಲ ಪುಸಿಯು ಸತಿಯರಾಟವೆಲ್ಲ ಸಂಚು, ಸನ್ನೆ
ನೋಟವೆಲ್ಲ ಘನ್ನ ಘಾತಕ ಕೂಟವೆಲ್ಲ ವಂಚನೆ
ಪಾಟುಗೆಟ್ಟು ಹೆಂಗಳೊಡನೆ ಕೋಟಲೆಗೊಂಡು ತಿರುಗಬೇಡಿ
ನೀಟುಗಾರತಿಯರೊಲುಮೆ ಬೂಟಕವೆಂಡು ತಿಳಿಯಿರೊ

ಸೋತೆನೆಂದು ವಿಟಗೆ ದೈನ್ಯ ಮಾತನಾಡಿ ಮರುಳುಗೊಳಿಸಿ
ಕಾತರವನು ಕೊಟ್ಟು ಅವನ ಮಾತಾಪಿತರ ತೊಲಗಿಸಿ
ಪ್ರೀತಿಪಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಜಾತಿಕಾರ ಹೆಂಗಳ

ಧರಣಿಜನರು ಕೇಳಿ ಲೇಶ ಕರುಣವಿಲ್ಲ ನಾರಿಯರಿಗೆ
ಎರಳೆಕಂಗಳ ಹೆಂಗಳೊಲುಮೆ ಬರೆಹ ನೀರಮೇಲಿನ
ಸರಸಮುಖಿಯರಿರವ ನೀವು ಬರಿದೆ ನಂಬಿ ಕೆಡಲುಬೇಡಿ
ಗುರುಪುರಂದರ ವಿಠಲರಾಯನ ಚರಣವ ನಂಬಿ ಬದುಕಿರೊ
(ಕ್ರುಪೆ- http://haridasa.sampada.ನೆಟ್ )